1971ರಲ್ಲಿ ಪಾಕಿಸ್ತಾನಿ (Pakistan) ಪಡೆಗಳು ಧ್ವಂಸಗೊಳಿಸಿದ ಕಾಳಿಮಾತಾ (Kaali Mandir) ದೇವಾಲಯವನ್ನು 50 ವರ್ಷಗಳ ನಂತರ ಭಾರತದ ಸಹಾಯದೊಂದಿಗೆ ನವೀಕರಿಸಕಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ದೇವಾಲಯವನ್ನು ಉದ್ಘಾಟಿಸಿದರು.
ಬೆಂಗಳೂರು (ಡಿ. 18): 1971ರಲ್ಲಿ ಪಾಕಿಸ್ತಾನಿ (Pakistan) ಪಡೆಗಳು ಧ್ವಂಸಗೊಳಿಸಿದ ಕಾಳಿಮಾತಾ (Kaali Mandir) ದೇವಾಲಯವನ್ನು 50 ವರ್ಷಗಳ ನಂತರ ಭಾರತದ ಸಹಾಯದೊಂದಿಗೆ ನವೀಕರಿಸಕಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ದೇವಾಲಯವನ್ನು ಉದ್ಘಾಟಿಸಿದರು.
1971ರಲ್ಲಿ ನಡೆದ ಯುದ್ದದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ ಅದರ ಹಿಡಿತದಿಂದ ಬಾಂಗ್ಲಾದೇಶವನ್ನು ಮುಕ್ತಗೊಳಿಸಿ ಬಾಂಗ್ಲಾದೇಶ ಉದಯಕ್ಕೆ ಕಾರಣವಾಯಿತು. ಈ ದಿನವನ್ನು 'ವಿಜಯ ದಿವಸ್' (Vijay Diwas) ಎಂದು ಆಚರಿಸಲಾಗುತ್ತದೆ. ಈ ಯುದ್ಧದಲ್ಲಿ ಕಾಳಿ ಮಂದಿರ ನೆಲಸಮಗೊಳ್ಳುತ್ತದೆ. ಈ ದೇವಾಲಯಕ್ಕೆ . ಬರೋಬ್ಬರಿ 600 ವರ್ಷಗಳ ಇತಿಹಾಸವಿದೆ . ಯುದ್ಧದ ಸಂದರ್ಭದಲ್ಲಿ ಈ ದೇವಾಲಯಕ್ಕೆ ನುಗ್ಗಿದ ಪಾಕಿಸ್ತಾನಿ ಸೈನಿಕರು ಆಪರೇಷನ್ ಸರ್ಚ್ ಲೈಟ್ ಹೆಸರಲ್ಲಿ ದೇವಾಲಯವನ್ನು ಧ್ವಂಸ ಮಾಡಿಬಿಟ್ಟರು. ದೇವಾಲಯದೊಳಗಿದ್ದ 250 ಹಿಂದೂಗಳನ್ನು ಅಮಾನುಷವಾಗಿ ಹತ್ಯೆ ಮಾಡಲಾಯಿತು.