WEB SPECIAL

ಗಣಪನ ಮಾರಿ ಬಂದ ಹಣ: ಧೃಡತೆಯತ್ತ ಹೆಣ್ಣುಮಕ್ಕಳ ಶಿಕ್ಷಣ!

Aug 31, 2019, 6:13 PM IST

ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಬೇಕು. ಆದರೆ, ಅದು ಪರಿಸರ ಸ್ನೇಹಿಯಾಗಿರಬೇಕು. ಗಣೇಶನ ಮೂರ್ತಿಗೆ ನೀಡುವ ಹಣ ಸಾಮಾಜಿಕ ಕಾರ್ಯಕ್ಕೆ ಉಪಯೋಗವಾಗಬೇಕು ಎಂಬ ನಿರ್ಧಾರ ನಿಮ್ಮದಾಗಿದ್ದರೆ ಬೆಂಗಳೂರು ರೋಟರಿ ಕ್ಲಬ್'ನ 'ಈ ಕ್ಲಬ್ ಆಫ್ ಗ್ರೀನ್ ಸಿಟಿ' ಸಂಸ್ಥೆ ಅದನ್ನು ಕಾರ್ಯರೂಪಕ್ಕೆ ತಂದಿದೆ. ಅಲ್ಲದೇ ಮಣ್ಣಿನ ಗಣಪತಿ ಮೂರ್ತಿಗಳ ಮಾರಾಟದಿಂದ ಬಂದ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವ ಕಾರ್ಯ ಮಾಡುತ್ತಿದೆ. ಈ ಕ್ಲಬ್ ಆಫ್ ಗ್ರೀನ್ ಸಿಟಿ ಕಾರ್ಯ ಉಳಿದ ಸ್ವಯಂ ಸೇವಾ ಸಂಸ್ಥೆಗಳಿಗೂ ಮಾದರಿ. ಒಟ್ಟಿನಲ್ಲಿ ಒಂದು ಕಡೆ ಪರಿಸರ ಪ್ರೇಮ ಇನ್ನೊಂದು ಕಡೆ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಗೆ ಅಭಿನಂದನೆ ಹೇಳೋಣ.