ಚಂದ್ರು ಸ್ನೇಹಿತ ಸೈಮನ್ಗೆ ಬಿಜೆಪಿ 5 ಲಕ್ಷ ರೂ ಕೊಟ್ಟು ಈ ರೀತಿ ಸುಳ್ಲು ಹೇಳಿಸಿದೆ ಎಂದಿದ್ದಾರೆ. ಜಮೀರ್ ಈ ರೀತಿ ಹೇಳಿಕೆಗೆ, ಚಂದ್ರು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು (ಏ. 10): ಉರ್ದು ಮಾತನಾಡಲು ಬರಲ್ಲ ಎಂದಿದ್ದಕ್ಕೆ ಚಂದ್ರು ಹತ್ಯೆಯಾಗಿದೆ ಎಂಬುದು ಸತ್ಯ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿರುವುದು ನೂರಕ್ಕೆ ನೂರರಷ್ಟುಸುಳ್ಳು. ಈ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಖಂಡಿಸಿದ ಶಾಸಕ ಜಮೀರ್ ಅಹ್ಮದ್, ಚಂದ್ರು ಸ್ನೇಹಿತ ಸೈಮನ್ಗೆ ಬಿಜೆಪಿ 5 ಲಕ್ಷ ರೂ ಕೊಟ್ಟು ಈ ರೀತಿ ಸುಳ್ಲು ಹೇಳಿಸಿದೆ ಎಂದಿದ್ದಾರೆ. ಜಮೀರ್ ಈ ರೀತಿ ಹೇಳಿಕೆಗೆ, ಚಂದ್ರು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.