ನಮ್ಮದು ಕಟ್ಟುವ ಪರಂಪರೆ. ನಿಮ್ಮದು ಕೆಡವುವ ಪರಂಪರೆ; ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

Aug 15, 2021, 1:38 PM IST

ಬೆಂಗಳೂರು (ಆ. 15): ಕಾಂಗ್ರೆಸ್ ಕಚೇರಿಯಲ್ಲಿ ಡಿಕೆಶಿ ಧ್ವಜಾರೋಹಣ ನೆರವೇರಿಸಿದರು. ಭಾಷಣದ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಧ್ವಜಾರೋಹಣ ವೇಳೆ ಜಿಗಜಿಣಗಿ ಮುನಿಸು, ನಿರೂಪಕನಿಗೆ ತರಾಟೆ, ಮನವೊಲಿಸಿದ ಶಶಿಕಲಾ ಜೊಲ್ಲೆ

'ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಕೂಗುಮಾರಿಗಳು ಪ್ರಯತ್ನಿಸುತ್ತಿದ್ದಾರೆ. ಅವರು ಕ್ಯಾಂಟೀನ್ ಹೆಸರು ಬದಲಿಸಬಹುದು. ಆದರೆ ಅವರ ತ್ಯಾಗ, ಬಲಿದಾನಗಳನ್ನು ಇತಿಹಾಸ ಪುಟದಿಂದ ಅಳಿಸಲು ಸಾಧ್ಯವಿಲ್ಲ. ನಮ್ಮದು ಕಟ್ಟುವ ಪರಂಪರೆ. ನಿಮ್ಮದು ಕೆಡವುವ ಪರಂಪರೆ. ನೀವು ಕೆಡವಿದ್ರೆ ಅದರ ಹತ್ತರಷ್ಟು ಕಟ್ಟುವ ಸಾಮರ್ಥ್ಯ ಕಾಂಗ್ರೆಸ್ಸಿಗಿದೆ' ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಡಿಕೆಶಿ ಎಡವಟ್ಟೊಂದನ್ನು ಮಾಡಿದರು. ನಮ್ಮ ನಾಯಕಿ ಹುತಾತ್ಮ ಸೋನಿಯಾ ಗಾಂಧಿ ಎಂದಿದ್ದಾರೆ. ಕೂಡಲೇ ತಪ್ಪು ಸರಿಪಡಿಸಿಕೊಂಡು ಮುಂದೆ ಓದಿದರು.