ವರುಣನ ಆರ್ಭಟಕ್ಕೆ ತುಂಬಿದ ಕಬಿನಿ; ಜಲಾಶಯದಿಂದ ನೀರು ಬಿಡುಗಡೆ

Aug 6, 2020, 1:08 PM IST

ಬೆಂಗಳೂರು (ಅ. 06): ಮೈಸೂರಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು ಕಬಿನಿ ಜಲಾಶಯ ತುಂಬಿದ್ದು, ನೀರನ್ನು ಬಿಡಲಾಗಿದೆ. ಮಹಾಮಳೆಗೆ ಎಚ್‌ಡಿ ಕೋಟೆ- ಮಾದಾಪುರ ಸೇತುವೆ ಮುಳುಗಡೆಯಾಗಿದೆ. ಎಚ್‌ಡಿ ಕೋಟೆ, ನಂಜನಗೂಡಿನ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಸೇತುವೆ ಮೇಲೆ ನದಿ ನೀರು ಉಕ್ಕಿ ಹರಿಯುತ್ತಿದ್ದು ಇದನ್ನು ನೋಡಲು ಜನ ಬರುತ್ತಿದ್ದಾರೆ. ಆಯಕಟ್ಟಿನ ಜಾಗದಲ್ಲಿ ಅಧಿಕಾರಿಗಳು ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಬೇಕಾಗಿದೆ. ಸೇತುವೆ ಮೇಲೆ ನೀರು ಹರಿಯುವ ದೃಶ್ಯಗಳು ಮೈ ಜುಂ ಎನ್ನುವಂತಿದೆ..!

ಮಹಾಮಳೆಗೆ ಬೆಚ್ಚಿ ಬಿದ್ದ ಬೆಳಗಾವಿ, ಮನೆಗಳಿಗೆ ನುಗ್ಗಿದ ನೀರು, ವರುಣನ ಅರ್ಭಟಕ್ಕೆ ಜನ ತತ್ತರ