ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್! “ಸನ್ ಆಫ್ ರೇವಣ್ಣ”ಗೆ ಕಾದಿದ್ಯಾ ಭಾರೀ ಸಂಕಷ್ಟ..?

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್! “ಸನ್ ಆಫ್ ರೇವಣ್ಣ”ಗೆ ಕಾದಿದ್ಯಾ ಭಾರೀ ಸಂಕಷ್ಟ..?

Published : May 14, 2024, 12:16 PM IST

ಇತ್ತ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಾ ಇದ್ರೆ, ಅತ್ತ ಇಡೀ ಪ್ರಕರಣದ ಕೇಂದ್ರ ಬಿಂದು ಪ್ರಜ್ವಲ್ ರೇವಣ್ಣನ ಪತ್ತೆಯೇ ಇಲ್ಲ. ಪ್ರಜ್ವಲ್ ಸಿಗದೇ ಇದ್ರೂ ಆತನ ಕೊರಳಿಗೆ ಸುತ್ತಿಕೊಂಡಿರೋ ಕಾನೂನಿನ ಉರುಳು ಮಾತ್ರ ದಿನದಿಂದ ದಿನಕ್ಕೆ ಬಿಗಿಯಾಗ್ತಾನೇ ಇದೆ. 
 

ಬೆಂಗಳೂರು(ಮೇ.14):  ಸಂಸದ ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗ್ತಿದೆ. ಅಪ್ಪನಿಗೆ ಜಾಮೀನು.. ಮಗನ ಕೊರಳಿಗೆ ಕಾನೂನಿನ ಉರುಳು..? ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ಆಪ್ತರು ಅರೆಸ್ಟ್ ಆಗಿದ್ದೇಕೆ..? ವಿಡಿಯೋ ವೈರಲ್ ಆರೋಪ ಜೆಡಿಎಸ್ ಶಾಸಕನ ಮೇಲೆ ತಿರುಗಿದ್ದೇಕೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಅಪ್ಪ ಬಾಹರ್, ಮಗ ಅಂದರ್..? 

ಇತ್ತ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಾ ಇದ್ರೆ, ಅತ್ತ ಇಡೀ ಪ್ರಕರಣದ ಕೇಂದ್ರ ಬಿಂದು ಪ್ರಜ್ವಲ್ ರೇವಣ್ಣನ ಪತ್ತೆಯೇ ಇಲ್ಲ. ಪ್ರಜ್ವಲ್ ಸಿಗದೇ ಇದ್ರೂ ಆತನ ಕೊರಳಿಗೆ ಸುತ್ತಿಕೊಂಡಿರೋ ಕಾನೂನಿನ ಉರುಳು ಮಾತ್ರ ದಿನದಿಂದ ದಿನಕ್ಕೆ ಬಿಗಿಯಾಗ್ತಾನೇ ಇದೆ. 

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌: ಹೊಳೆನರಸೀಪುರ, ಹಾಸನದಲ್ಲಿ ಎಫ್‌ಎಸ್‌ಎಲ್‌ ಪರಿಶೀಲನೆ

ಇತ್ತ ಅಪ್ಪ ಎಚ್.ಡಿ ರೇವಣ್ಣಗೆ ಜಾಮೀನು ಸಿಕ್ಕಿದ್ರೆ, ಅತ್ತ ಸತತ 17ನೇ ದಿನವೂ ಮರಿ ರೇವಣ್ಣನ ಪತ್ತೆಯೇ ಇಲ್ಲ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ಬೇಟೆಗೆ ಬಲೆ ಬೀಸಿರೋ ಎಸ್ಐಟಿ, ಇಲ್ಲಿ ಕಾನೂನಿನ ಉರುಳನ್ನು ಬಿಗಿಗೊಳಿಸ್ತಾ ಇದೆ. ಅತ್ಯಾಚಾರ ಪ್ರಕರಣಗಳಲ್ಲಿ ಪ್ರಜ್ವಲ್ ವಿರುದ್ಧ ಒಂದೊಂದೇ ಸಾಕ್ಷಿಗಳನ್ನು ಕಲೆ ಹಾಕ್ತಾ ಇದೆ. 

ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡು ಸೋಮವಾರಕ್ಕೆ ಭರ್ತಿ 17 ದಿನ. ಅತ್ಯಾಚಾರ ಪ್ರಕರಣ ದಾಖಲಾಗುವ ಸುಳಿವು ಸಿಗುತ್ತಲೇ, ಚುನಾವಣೆ ಮುಗಿಯುತ್ತಿದ್ದಂತೆ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರು. ಈ ಕ್ಷಣದವರೆಗೆ ಪ್ರಜ್ವಲ್ ಬಗ್ಗೆ ಎಸ್ಐಟಿಗೆ ಸುಳಿವು ಸಿಕ್ಕಿಲ್ಲ. ತಲೆತಪ್ಪಿಸಕೊಂಡಿರೋ ಜೆಡಿಎಸ್ ಸಂಸದ ವಾಪಸ್ ಬರೋದನ್ನೇ ಎಸ್ಐಟಿ ಅಧಿಕಾರಿಗಳು ಕಾಯ್ತಾ ಇದ್ದಾರೆ.ಅಪ್ಪ ಬಾಹರ್ ಆದ್ರೂ ಮಗ ಅಂದರ್ ಆಗೋದು ಪಕ್ಕಾ ಅಂತ ಹೇಳಲಾಗ್ತಿದೆ. ಕಾರಣ ಪ್ರಜ್ವರ್ ರೇವಣ್ಣ ವಿರುದ್ಧ ದಾಖಲಾಗಿರೋದು ಸಾಮಾನ್ಯ ಕೇಸ್‌ಗಳಲ್ಲ, ಅತ್ಯಾಚಾರ ಪ್ರಕರಣಗಳು. ಹೀಗಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ತೀಕಾ ಕಡಿಮೆ ಎನ್ನಲಾಗ್ತಿದೆ. 

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
Read more