ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್! “ಸನ್ ಆಫ್ ರೇವಣ್ಣ”ಗೆ ಕಾದಿದ್ಯಾ ಭಾರೀ ಸಂಕಷ್ಟ..?

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್! “ಸನ್ ಆಫ್ ರೇವಣ್ಣ”ಗೆ ಕಾದಿದ್ಯಾ ಭಾರೀ ಸಂಕಷ್ಟ..?

Published : May 14, 2024, 12:16 PM IST

ಇತ್ತ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಾ ಇದ್ರೆ, ಅತ್ತ ಇಡೀ ಪ್ರಕರಣದ ಕೇಂದ್ರ ಬಿಂದು ಪ್ರಜ್ವಲ್ ರೇವಣ್ಣನ ಪತ್ತೆಯೇ ಇಲ್ಲ. ಪ್ರಜ್ವಲ್ ಸಿಗದೇ ಇದ್ರೂ ಆತನ ಕೊರಳಿಗೆ ಸುತ್ತಿಕೊಂಡಿರೋ ಕಾನೂನಿನ ಉರುಳು ಮಾತ್ರ ದಿನದಿಂದ ದಿನಕ್ಕೆ ಬಿಗಿಯಾಗ್ತಾನೇ ಇದೆ. 
 

ಬೆಂಗಳೂರು(ಮೇ.14):  ಸಂಸದ ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗ್ತಿದೆ. ಅಪ್ಪನಿಗೆ ಜಾಮೀನು.. ಮಗನ ಕೊರಳಿಗೆ ಕಾನೂನಿನ ಉರುಳು..? ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ಆಪ್ತರು ಅರೆಸ್ಟ್ ಆಗಿದ್ದೇಕೆ..? ವಿಡಿಯೋ ವೈರಲ್ ಆರೋಪ ಜೆಡಿಎಸ್ ಶಾಸಕನ ಮೇಲೆ ತಿರುಗಿದ್ದೇಕೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಅಪ್ಪ ಬಾಹರ್, ಮಗ ಅಂದರ್..? 

ಇತ್ತ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಾ ಇದ್ರೆ, ಅತ್ತ ಇಡೀ ಪ್ರಕರಣದ ಕೇಂದ್ರ ಬಿಂದು ಪ್ರಜ್ವಲ್ ರೇವಣ್ಣನ ಪತ್ತೆಯೇ ಇಲ್ಲ. ಪ್ರಜ್ವಲ್ ಸಿಗದೇ ಇದ್ರೂ ಆತನ ಕೊರಳಿಗೆ ಸುತ್ತಿಕೊಂಡಿರೋ ಕಾನೂನಿನ ಉರುಳು ಮಾತ್ರ ದಿನದಿಂದ ದಿನಕ್ಕೆ ಬಿಗಿಯಾಗ್ತಾನೇ ಇದೆ. 

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌: ಹೊಳೆನರಸೀಪುರ, ಹಾಸನದಲ್ಲಿ ಎಫ್‌ಎಸ್‌ಎಲ್‌ ಪರಿಶೀಲನೆ

ಇತ್ತ ಅಪ್ಪ ಎಚ್.ಡಿ ರೇವಣ್ಣಗೆ ಜಾಮೀನು ಸಿಕ್ಕಿದ್ರೆ, ಅತ್ತ ಸತತ 17ನೇ ದಿನವೂ ಮರಿ ರೇವಣ್ಣನ ಪತ್ತೆಯೇ ಇಲ್ಲ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ಬೇಟೆಗೆ ಬಲೆ ಬೀಸಿರೋ ಎಸ್ಐಟಿ, ಇಲ್ಲಿ ಕಾನೂನಿನ ಉರುಳನ್ನು ಬಿಗಿಗೊಳಿಸ್ತಾ ಇದೆ. ಅತ್ಯಾಚಾರ ಪ್ರಕರಣಗಳಲ್ಲಿ ಪ್ರಜ್ವಲ್ ವಿರುದ್ಧ ಒಂದೊಂದೇ ಸಾಕ್ಷಿಗಳನ್ನು ಕಲೆ ಹಾಕ್ತಾ ಇದೆ. 

ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡು ಸೋಮವಾರಕ್ಕೆ ಭರ್ತಿ 17 ದಿನ. ಅತ್ಯಾಚಾರ ಪ್ರಕರಣ ದಾಖಲಾಗುವ ಸುಳಿವು ಸಿಗುತ್ತಲೇ, ಚುನಾವಣೆ ಮುಗಿಯುತ್ತಿದ್ದಂತೆ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರು. ಈ ಕ್ಷಣದವರೆಗೆ ಪ್ರಜ್ವಲ್ ಬಗ್ಗೆ ಎಸ್ಐಟಿಗೆ ಸುಳಿವು ಸಿಕ್ಕಿಲ್ಲ. ತಲೆತಪ್ಪಿಸಕೊಂಡಿರೋ ಜೆಡಿಎಸ್ ಸಂಸದ ವಾಪಸ್ ಬರೋದನ್ನೇ ಎಸ್ಐಟಿ ಅಧಿಕಾರಿಗಳು ಕಾಯ್ತಾ ಇದ್ದಾರೆ.ಅಪ್ಪ ಬಾಹರ್ ಆದ್ರೂ ಮಗ ಅಂದರ್ ಆಗೋದು ಪಕ್ಕಾ ಅಂತ ಹೇಳಲಾಗ್ತಿದೆ. ಕಾರಣ ಪ್ರಜ್ವರ್ ರೇವಣ್ಣ ವಿರುದ್ಧ ದಾಖಲಾಗಿರೋದು ಸಾಮಾನ್ಯ ಕೇಸ್‌ಗಳಲ್ಲ, ಅತ್ಯಾಚಾರ ಪ್ರಕರಣಗಳು. ಹೀಗಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ತೀಕಾ ಕಡಿಮೆ ಎನ್ನಲಾಗ್ತಿದೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more