ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆ ಸುತ್ತ ಅನುಮಾನ; ಕಾರಣವಾಯ್ತಾ ರಾಜಕಾರಣಿಗಳ ಅವಮಾನ?

Dec 17, 2020, 4:06 PM IST

ಬೆಂಗಳೂರು (ಡಿ. 17): ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಅಪ್‌ಡೇಟ್ಸ್ ಸಿಗುತ್ತಿದೆ. 15 ದಿನಗಳ ಹಿಂದೆ ಕೆಂಗೇರಿ ಎಸಿಪಿ ಪೋಸ್ಟ್‌ಗೆ ಪ್ರಯತ್ನಿಸಿದ್ದರು.ಈ ಸಂಬಂಧ ಹಲವು ರಾಜಕಾರಣಿಗಳನ್ನು ಭೇಟಿ ಮಾಡಿದ್ದರು. ಆದರೆ ಬೆಂಗಳೂರಿನಲ್ಲಿ ಯಾವುದೇ ಜಾಗವೂ ಸಿಕ್ಕಿರಲಿಲ್ಲ. ತನ್ನ ಬ್ಯಾಚ್‌ನ ಎಲ್ಲಾ ಅಧಿಕಾರಿಗಳು ಎಸಿಪಿಯಾಗಿದ್ದರು. ಆದರೆ ತಾನು ಆಗಿಲ್ವಲ್ಲ ಎಂಬ ಕೊರಗಿನಿಂದ ಈ ರೀತಿ ಮಾಡಿಕೊಂಡ್ರಾ ಎಂಬ ಅನುಮಾನ ವ್ಯಕ್ತವಾಗಿದೆ. ಇದು ಬರೀ ಶಂಕೆಯಾಗಿದ್ದು, ತನಿಖೆಯ ಬಳಿಕ ಸತ್ಯಾಂಶ ಹೊರಬರಬೇಕಿದೆ. 

ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆಗೆ ಟ್ವಿಸ್ಟ್; ಸ್ನೇಹಿತರ ಮೇಲೆಯೇ ಪೊಲೀಸರ ಕಣ್ಣು