ರಾಜ್ಯಾದ್ಯಂತ ಕನ್ನಡ ಹಬ್ಬ: ಕರಾವಳಿಯಲ್ಲಿ ಕರಾಳ ದಿನ; ಮತ್ತೆ ಕೇಳಿಬಂತು ತುಳು ರಾಜ್ಯದ ಕೂಗು!

Nov 1, 2023, 1:30 PM IST

ರಾಜ್ಯಾದ್ಯಂತ ಇಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಇನ್ನೊಂದೆಡೆ, ಕರಾವಳಿಯಲ್ಲಿ ಕರಾಳ ದಿನ ಆಚರಿಸಲಾಗುತ್ತಿದೆ. ಅಲ್ಲದೆ, ಪ್ರತ್ಯೇಕ ತುಳು ರಾಜ್ಯಕ್ಕಾಗಿ ಕೂಗು ಕೇಳಿಬಂದಿದೆ. ಕನ್ನಡ ರಾಜ್ಯೋತ್ಸವದಂದೇ ಪ್ರತ್ಯೇಕ ತುಳು ರಾಜ್ಯಕ್ಕಾಗಿ ಕೂಗು ಕೇಳಿಬಂದಿದ್ದು, ತುಳು ಭಾಷೆಯ ಸ್ಥಾನಮಾನಕ್ಕೆ ಆಗ್ರಹಿಸಿ ಅಭಿಯಾನ ನಡೆಯುತ್ತಿದೆ.
#TULUNADSTATE ಹ್ಯಾಷ್‌ಟ್ಯಾಗ್‌ ಮೂಲಕ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ನಡೆಸಲಾಗ್ತಿದೆ.