ಮನೆ ಮೇಲೆ ಗುಡ್ಡ ಕುಸಿದು ತಲಕಾವೇರಿ ಅರ್ಚಕ ಕುಟುಂಬ ನಾಪತ್ತೆ

Aug 6, 2020, 2:40 PM IST

ಕೊಡಗು (ಅ. 06): ಮಹಾಮಳೆ ಸೃಷ್ಟಿಸುತ್ತಿರುವ ಅವಾಂತರಗಳು ಒಂದೆರಡಲ್ಲ. ತಲಕಾವೇರಿ ಅರ್ಚಕರಾದ ನಾರಾಯಣಾಚಾರ್ ಮನೆ ಮೇಲೆ ಗುಡ್ಡ ಕುಸಿದಿದ್ದು, ಅರ್ಚಕರ ಕುಟುಂಬ ಮನೆಯಡಿ ಸಿಲುಕಿರುವ ಸಾಧ್ಯತೆ ಇದೆ. ನಿನ್ನೆ ರಾಮ ಮಂದಿರಕ್ಕೆ ಶಿಲಾನ್ಯಾಸ ಹಿನ್ನಲೆಯಲ್ಲಿ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮನೆಗೆ ವಾಪಸ್ಸಾಗಿದ್ದರು. ರಾತ್ರಿ ಮನೆ ಮೇಲೆ ಗುಡ್ಡ ಕುಸಿದಿದ್ದು, ಕುಟುಂಬಸ್ಥರು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ. ಎನ್‌ ಡಿಆರ್‌ಎಫ್ ಪಡೆ ಸ್ಥಳಕ್ಕೆ ಧಾವಿಸಿದೆ. 

ಗದ್ದೆಗೆ ನುಗ್ಗಿದ ನೀರು; ರಕ್ಷಣೆಗಾಗಿ 3 ಗಂಟೆಗಳ ಕಾಲ ಮರವೇರಿ ಕುಳಿತ ವೃದ್ಧ