ಅರ್ಚಕರ ಆಸ್ತಿ ಲೆಕ್ಕಾಚಾರದ ಬಗ್ಗೆ ಚರ್ಚೆ ಶುರು; ಮನೆಯಲ್ಲಿತ್ತಂತೆ 30 ಲಕ್ಷ ಕ್ಯಾಶ್..!

Aug 11, 2020, 4:26 PM IST

ಕೊಡಗು (ಆ. 11): ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಭೂ ಸಮಾಧಿಯಾಗಿರುವ ತಲಕಾವೇರಿ ಅರ್ಚಕರ ಕುಟುಂಬದ ಶೋಧ ಕಾರ್ಯ ಮುಂದುವರೆದಿದ್ದು ಇನ್ನೂ ಕೂಡಾ ಅವಶೇಷಗಳು ಸಿಕ್ಕಿಲ್ಲ. ಈ ನಡುವೆ ಅವರ ಆಸ್ತಿಪಾಸ್ತಿ ಬಗ್ಗೆಯೂ ಚರ್ಚೆ ಶುರುವಾಗಿದೆ. ಅರ್ಚಕರ ಮನೆಯಲ್ಲಿ 20-30 ಲಕ್ಷ ಕ್ಯಾಶ್ ಇತ್ತಂತೆ, 10 ಕ್ವಿಂಟಾಲ್ ಕರಿ ಮೆಣಸು, 5 ಕ್ವಿಂಟಾಲ್ ಏಲಕ್ಕಿ ಮನೆಯಲ್ಲಿತ್ತು ಎನ್ನಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮನೆಯನ್ನು ಖಾಲಿ ಮಾಡಿ ಎಂದು ಹೇಳಿದ್ದರೂ ಕೂಡಾ ಅರ್ಚಕರು ತಡ ಮಾಡಿದ್ದೇ ಅನಾಹುತಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. 

ಸಂಪತ್ತು ಕಾಪಾಡಲು ಮನೆ ತೊರೆಯಲು ನಿರಾಕರಿಸಿದ್ರಾ ಅರ್ಚಕರ ಕುಟುಂಬ? ಇಲ್ಲಿದೆ Exclusive ವಿಚಾರ!