ಸಿಎಂ ಬಿಎಸ್‌ವೈ ಕುರ್ಚಿ ಭದ್ರವಾಗಿರೋದರ ಹಿಂದಿನ ಶಕ್ತಿ ಇವರೇನಾ..?

Jun 15, 2021, 3:26 PM IST

ಬೆಂಗಳೂರು (ಜೂ. 15): ಒಂದು ಕಡೆ ಸಿಎಂ ಬಿಎಸ್‌ವೈ ನಾಯಕತ್ವ ಬದಲಾವಣೆ ಕೂಗು, ಇನ್ನೊಂದೆಡೆ  ಕುರ್ಚಿ ಇನ್ನೆರಡು ವರ್ಷ ಭದ್ರವಾಗಿರಲಿದೆ ಎಂದು ಹೈಕಮಾಂಡ್‌ನಿಂದ ಸಂದೇಶ ಎರಡೂ ವಿಚಾರ ಚರ್ಚೆಯಲ್ಲಿದೆ. ನಾಯಕತ್ವ ಬದಲಾವಣೆ ವಿಚಾರಕ್ಕೆ ತೆರೆ ಬಿದ್ದಿದೆ.

ಹೈಕಮಾಂಡ್ ಶ್ರೀರಕ್ಷೆ ಭಿನ್ನಮತರ ಅಸಮಾಧಾನ; ಸಿಎಂ ವಿರುದ್ಧ ಸ್ಫೋಟಗೊಳ್ಳುತ್ತಾ ಬಂಡಾಯ..?

 ಕೆಲ ಸಚಿವರು ಹಾಗೂ ಶಾಸಕರು ಪದೇ ಪದೇ ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ನೀಡಿದ್ದರಿಂದ ಅಂತಿಮವಾಗಿ ಎಲ್ಲ ಸಚಿವರು-ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿ ಉಸ್ತುವಾರಿ ಅರುಣ್ ಸಿಂಗ್ ಜೂ. 16 ಕ್ಕೆ ರಾಜ್ಯಕ್ಕೆ ಬರಲಿದ್ದಾರೆ.  ಈ ಮೂರು ದಿನಗಳ ಸಭೆ ಬಳಿಕ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಸಿಗಬಹುದು ಎಂಬ ನಿರೀಕ್ಷೆಯಿದೆ.