ಮತ್ತೆ ಶಾಂತಿವನದತ್ತ ಸಿದ್ದರಾಮಯ್ಯ, 'ಹಿಂದ' ಸಮಾವೇಶದ ರಣತಂತ್ರ.?

Feb 11, 2021, 12:47 PM IST

ಬೆಂಗಳೂರು (ಫೆ. 11): ಬಜೆಟ್ ಅಧಿವೇಶನಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ ಮುಂದಾಗಿದ್ದಾರೆ. ಫೆ. 25 ಕ್ಕೆ ಧರ್ಮಸ್ಥಳದ ಶಾಮತಿವನಕ್ಕೆ ತೆರಳಲಿದ್ದಾರೆ. 8 ದಿನಗಳ ಕಾಲ ಅಲ್ಲಿ ವಿಶ್ರಾಂತಿ ಪಡೆದು, ಅಲ್ಲಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. 

ಚುನಾವಣೆಗೆ 2013 ರ ತಂತ್ರ ಪ್ರಯೋಗಿಸಲು ಸಿದ್ದು ಪ್ಲ್ಯಾನ್..!

'ಹಿಂದ' ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದು, ಪ್ರಮುಖ ಹಿಂದುಳಿದ ಹಾಗೂ ದಲಿತ ನಾಯಕರೊಂದಿಗೆ ಸಭೆ ನಡೆಸಿ ಹೋರಾಟದ ರೂಪುರೇಷೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.  ಅಹಿಂದದಲ್ಲಿ ತಮ್ಮ ಜೊತೆಗಿದ್ದ ನಾಯಕರನ್ನು ಒಗ್ಗೂಡಿಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ಧಾರೆ ಎಂಬ ಮಾತು ಕೇಳಿ ಬರುತ್ತಿದೆ.