ಬೆಲೆ ಏರಿಕೆ (Price Hike) ನೆರೆ ಪರಿಹಾರದಲ್ಲಿನ (Flood Relief) ವೈಫಲ್ಯ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಅಧಿವೇಶನದುದ್ದಕ್ಕೂ ಪ್ರತಿನಿತ್ಯ ಪ್ರತಿಭಟನೆ ಹಮ್ಮಿಕೊಳ್ಳಲು ಕಾಂಗ್ರೆಸ್ (Congress) ನಿರ್ಧರಿಸಿದೆ.
ಬೆಂಗಳೂರು (ಡಿ. 16): ಬೆಲೆ ಏರಿಕೆ (Price Hike) ನೆರೆ ಪರಿಹಾರದಲ್ಲಿನ (Flood Relief) ವೈಫಲ್ಯ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಅಧಿವೇಶನದುದ್ದಕ್ಕೂ ಪ್ರತಿನಿತ್ಯ ಪ್ರತಿಭಟನೆ ಹಮ್ಮಿಕೊಳ್ಳಲು ಕಾಂಗ್ರೆಸ್ (Congress) ನಿರ್ಧರಿಸಿದೆ.
ಬೆಳಗಾವಿ (Belagavi) ನಗರದಿಂದ ಸುವರ್ಣಸೌಧದವರೆಗೆ ಟ್ರಾಕ್ಟರ್, ಟ್ರಕ್, ಚಕ್ಕಡಿ ಮೂಲಕ ರಾರಯಲಿ ನಡೆಸಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಡಿ.ಕೆ.ಶಿವಕುಮಾರ್, ಆರ್ ವಿ ದೇಶಪಾಂಡೆ ಸೇರಿದಂತೆ ವಿಧಾನಸಭೆ ಹಾಗೂ ಪರಿಷತ್ ಸದಸ್ಯರು ಒಟ್ಟಿಗೆ ವಾಹನಗಳಲ್ಲಿ ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧಕ್ಕೆ ಆಗಮಿಸಿದರು. ಇದೇ ವೇಳೆ ಕಾರ್ಯಕರ್ತರು ಬೇರೆ ಬೇರೆ ವಾಹನಗಳ ಮೂಲಕ ರಾರಯಲಿಯಲ್ಲಿ ಸಾಥ್ ನೀಡಿದರು.