ಸಂತ್ರಸ್ಥೆ ಬರದೇ ಇದ್ದರೆ 'ಸೀಡಿ' ಪ್ರಕರಣವೇ ಠುಸ್ ಆಗುತ್ತಾ.?

Mar 3, 2021, 10:38 AM IST

ಬೆಂಗಳೂರು (ಮಾ. 03): ಸಾಹುಕಾರ್ ಜಾರಕಿಹೊಳಿ ವಿರುದ್ಧ ಕೇಳಿ ಬಂದಿರುವ ಲೈಂಗಿಕ ವಿವಾದ ಸಂಬಂಧ ಸಂತ್ರಸ್ತೆ ಬದಲಿಗೆ 3 ನೇ ವ್ಯಕ್ತಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿರುವ ದೂರಿಗೆ ಮಾನ್ಯತೆ ಸಿಗುವುದಾ ಎಂಬ ಪ್ರಶ್ನೆ ಎದ್ದಿದೆ. 

ಅಧಿವೇಶನದಲ್ಲೂ ಸದ್ದು ಮಾಡಲಿದೆ ಸಾಹುಕಾರ್ ಸೀಡಿ; ಬಿಎಸ್‌ವೈ ನಡೆಯೇನು.?

ಕಾನೂನು ಪ್ರಕಾರ ಸಂತ್ರಸ್ತ ಯುವತಿ ದೂರು ನೀಡಿದರೆ ಹೆಚ್ಚಿನ ಮಹತ್ವ ಇರುತ್ತದೆ. ಸಂತ್ರಸ್ತೆಯನ್ನು ಹೊರತುಪಡಿಸಿ ಬೇರೆಯವರು ದೂರು ನೀಡಿದರೆ ಹೆಚ್ಚಿನ ಪ್ರಾಮುಖ್ಯತೆ ಇರುವುದಿಲ್ಲ. ಯುವತಿ ಕೂಡಾ ಪೂರಕ ಹೇಳಿಕೆ ಕೊಟ್ಟರೆ ಪ್ರಕರಣಕ್ಕೆ ಮಾನ್ಯತೆ ಸಿಗಲಿದೆ. ಕಾನೂನು ಏನ್ ಹೇಳುತ್ತೆ.? ಸಾಧ್ಯಾಸಾಧ್ಯತೆ ಏನು.? ಹಿರಿಯ ವಕೀಲ ಶ್ಯಾಂ ಸುಂದರ್ ಮಾತನಾಡಿದ್ದಾರೆ.