ಮುಂದಿನ ಚುನಾವಣೆಯಲ್ಲಿ ಡಿಕೆಶಿಯನ್ನು ಸೋಲಿಸುವುದಾಗಿ ಜಾರಕಿಹೊಳಿ ಪಣ!

Mar 29, 2021, 11:02 AM IST

ಬೆಂಗಳೂರು (ಮಾ. 29): ಸೀಡಿ ಪ್ರಕರಣ ಇದೀಗ ಜಾರಕೊಹೊಳಿ- ಡಿಕೆ ಶಿವಕುಮಾರ್ ನಡುವಿನ ಸಮರವಾಗಿ ತಿರುಗಿದೆ. ಶಿವಕುಮಾರ್‌ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದಾಗಿ ಪಣ ತೊಟ್ಟಅವರು, ‘ಮುಂದಿನ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್‌ನನ್ನು ಸೋಲಿಸಲು ಎಲ್ಲಾ ತಯಾರಿ ನಡೆಸುತ್ತೇನೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೂ ಬೆಂಬಲ ನೀಡಲು ಸಿದ್ಧ. ಶಿವಕುಮಾರ್‌ ವಿರುದ್ಧ ಯಾರು ನಿಂತರೂ ಬೆಂಬಲ ನೀಡುತ್ತೇನೆ’ ಎಂದಿದ್ದಾರೆ. ಈ ಹೇಳಿಕೆ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದೆ. ಈ ಕೇಸ್‌ ಎಲ್ಲಿಂದ ಎಲ್ಲಿಗೆ ಸಾಗುತ್ತಿದೆ..? ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ. 

ಮಹಾನಾಯಕ ಡಿಕೆಶಿ ವಿರುದ್ಧ ಜಾರಕಿಹೊಳಿ ಬಾಂಬ್ ಸ್ಫೋಟಿಸೋದ್ಯಾವಾಗ.?