ಏನೋ ಮಾಡಲು ಹೋಗಿ ತಗಲಾಕ್ಕೊಂಡ ರಾಧಿಕಾ, ಮುಚ್ಚಿಟ್ಟ 'ಗುಟ್ಟು' ರಟ್ಟು ಮಾಡಿದ ಸಹೋದರ.!

Jan 9, 2021, 10:20 AM IST

ಬೆಂಗಳೂರು (ಜ. 09): ವಂಚಕ ಯುವರಾಜ್ ಜೊತೆ ಹಣಕಾಸು ವ್ಯವಹಾರ ವಿವಾದ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ನಾಲ್ಕು ತಾಸುಗಳ ಕಾಲ ಸಿಸಿಬಿ ವಿಚಾರಣೆಗೆ ಒಳಪಟ್ಟರು. ವಿಚಾರಣೆ ವೇಳೆ 75 ಲಕ್ಷ ವ್ಯವಹಾರದ ಬಗ್ಗೆ ರಾಧಿಕಾ ಬಾಯ್ಬಿಟ್ಟಿದ್ದರು. ಆದರೆ 1 ಕೋಟಿ ನಗದು ವ್ಯವಹಾರದ ಬಗ್ಗೆ ಬಾಯ್ಬಿಟ್ಟಿಲ್ಲ.

ಕಾಟಚಾರಕ್ಕೆ ರಾಧಿಕಾ ವಿಚಾರಣೆ ಮುಗಿಸಿತಾ ಸಿಸಿಬಿ..? ಪ್ರಶ್ನೋತ್ತರಗಳು ಹಾಗಿವೆ ನೋಡಿ!

ಈ ವಿಚಾರವನ್ನು ರವಿರಾಜ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಈ ವಿಚಾರ ಸಿಸಿಬಿಗೆ ಗೊತ್ತಾಗುತ್ತಿದ್ದಂತೆ ರಾಧಿಕಾ ಕಂಗಾಲಾಗಿ ಹೋದರು. ಕೂಡಲೇ ರಾಧಿಕಾ 60 ಲಕ್ಷ ರೂಗಳನ್ನು ಸಿಸಿಬಿಗೆ ಕೊಡುತ್ತಾರೆ. ಇನ್ನೊಂದು ಕಡೆ ಪ್ರಭಾವಿಗಳಿಂದ ಒತ್ತಡ ಹಾಕಿಸೋದಕ್ಕೆ ಶುರು ಮಾಡಿದ್ರು. ಇದಕ್ಕೆಲ್ಲಾ ಸಿಸಿಬಿ ಬಗ್ಗಲಿಲ್ಲ. ಇಲ್ಲಿ ಒಂದು ಕಡೆ ಸಿಸಿಬಿ ವಿಚಾರಣೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಪ್ರೆಸ್ ಮೀಟ್ ಮಾಡಿ ಎಡವಟ್ಟು ಮಾಡಿಕೊಂಡರು.