ಬೆಂಗಳೂರು ಗಲಭೆ: ಕಾಂಗ್ರೆಸ್‌ಗೆ ಸಿಎಂ ಯಡಿಯೂರಪ್ಪ ತಿರುಗೇಟು

Aug 21, 2020, 3:52 PM IST

ಬೆಂಗಳೂರು(ಆ.21): ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ತನಿಖೆಯ ಬಳಿಕ ಯಾರು ರಾಜಕೀಯ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ. 

ಬೆಂಗಳೂರು ಗಲಭೆ : ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸಿಗೆ ಹೊಸ ಟ್ವಿಸ್ಟ್

ನಮಗೇನು ರಾಜಕೀಯ ಮಾಡುವ ಅವಶ್ಯಕತೆ ಇಲ್ಲ, ತನಿಖೆಯಿಂದ ಅನೇಕ ಘಟನೆಗಳು ಹೊರಗೆ ಬರುತ್ತಿವೆ. ಸತ್ಯ ಸಂಗತಿ ಹೊರಗಡೆ ಬರುತ್ತಿವೆ, ತನಿಖೆಯ ಬಳಿಕ ಎಲ್ಲ ಸತ್ಯ ಬಯಲಿಗೆ ಬೀಳಲಿದೆ ಎಂದು ಹೇಳಿದ್ದಾರೆ.