ಯುಪಿ, ಎಂಪಿ.. ಹರ್ಯಾಣ ಬಳಿಕ ಕರ್ನಾಟಕದಲ್ಲೂ ಲವ್ ಜಿಹಾದ್‌ ನಿಯಂತ್ರಣಕ್ಕೆ ಸಿದ್ಧತೆ?

Nov 24, 2020, 9:43 AM IST

ಬೆಂಗಳೂರು (ನ. 24): ಲವ್ ಜಿಹಾದ್‌ಗೆ ನಿಯಂತ್ರಣ ಹೇರುವ ಕಾಯ್ದೆಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸಬೇಕು ಎಂದು ಸಾರ್ವಜನಿಕ ವಲಯದಿಂದ ಒತ್ತಡ ಕೇಳಿ ಬರುತ್ತಿದೆ. ಕೇಸರಿ ಪಾಳಯದಲ್ಲಿ, ಹಿಂದೂ ಪರ ಸಂಘಟನೆಗಳಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. 

ಪ್ರೀತಿಯ ಹೆಸರಲ್ಲಿ ಮತಾಂತರ ಮಾಡುವ ಲವ್‌ ಜಿಹಾದ್‌ಗೆ ನಿಯಂತ್ರಣ ಹೇರಬೇಕು. ನಿಷೇಧ ಮಾಡುವ ಸಂಬಂಧ ಪಕ್ಷದ ಕೋರ್‌ ಕಮಿಟಿ ಸಹ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕಠಿಣವಾದ ಕಾಯ್ದೆ ಜಾರಿಗೊಳಿಸಬೇಕು ಎಂದು ಸಿಟಿ ರವಿ ಹೇಳಿದ್ದಾರೆ. 

ಜೈಲಿನಲ್ಲೇ ಆ ರಾಜಕಾರಣಿಯ ದರ್ಬಾರ್... ಸ್ಮಾರ್ಟ್‌ ಫೋನು ಮತ್ತೊಂದು!

ಪ್ರೀತಿಸುವಾಗ ಧರ್ಮ ಅಡ್ಡ ಬರುವುದಿಲ್ಲ. ಮದುವೆಯಾಗಬೇಕಾದರೆ ಧರ್ಮ ಯಾಕೆ ಅಡ್ಡ ಬರುತ್ತದೆ? ಮತಾಂತರ ಮಾಡುವುದೇ ಇವರ ಮೂಲ ಉದ್ದೇಶ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.