Hijab Row: ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ವಿಚಾರಣೆ ಬೇಡ, ಹೈಕೋರ್ಟ್‌ಗೆ ಅರ್ಜಿ

Feb 15, 2022, 11:05 AM IST

ಉಡುಪಿ (ಫೆ. 15): ಉಡುಪಿಯ (Udupi) 5 ವಿದ್ಯಾರ್ಥಿನಿಯರ ಹಿಜಾಬ್ (Hijab) ಜಟಾಪಟಿಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ಪ್ರಕರಣದ ವಿಚಾರಣೆ ಬೇಡ ಎಂದು ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. 

'ಪಂಚರಾಜ್ಯ ಚುನಾವಣೆಯಲ್ಲಿ ಹಿಜಾಬ್ ವಿಷಯ ಪ್ರಸ್ತಾಪವಾಗಿದೆ. ರಾಜಕೀಯ ಲಾಭಕ್ಕಾಗಿ ಹಿಜಾಬ್ ಪ್ರಕರಣ ದುರ್ಬಳಕೆಯಾಗ್ತಿದೆ. ಹೀಗಾಗಿ ಚುನಾವಣೆ ಮುಗಿಯುವವರೆಗೂ ವಿಚಾರಣೆ ಬೇಡ ಎಂದು ವಕಿಲ ಮೊಹಮ್ಮದ್ ತಾಹೀರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾಎ.