'ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ಬಿಟ್ಬಿಡಿ'; ಅಖಂಡ ಮನೆ ಮುಂದೆ ಹೈಡ್ರಾಮಾ

Aug 17, 2020, 5:54 PM IST

ಬೆಂಗಳೂರು (ಆ. 17): ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ನಮ್ಮವರು ತಪ್ಪು ಮಾಡಿಲ್ಲ, ಗಲಭೆಯಲ್ಲಿ ಭಾಗಿಯಾಗಿಲ್ಲ ಎಂದು ಶಾಸಕ ಅಖಂಡ ಶ್ರೀನಿವಾಸ್ ಮನೆ ಮುಂದೆ ಮಹಿಳೆಯರು ಹೈಡ್ರಾಮಾ ಮಾಡಿದ್ದಾರೆ. 

'ಗಲಭೆ ನಡೆಯುವ ವೇಳೆ ನಮ್ಮ ಮಕ್ಕಳು ಮನೆಯಲ್ಲಿಯೇ ಇದ್ದರು. ಅವರು ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಬಿಡುಗಡೆಗೊಳಿಸಿ' ಎಂದು ಅಖಂಡ ಬಳಿ ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ. 'ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತಪ್ಪು ಮಾಡಿಲ್ಲದವರಿಗೆ ಶಿಕ್ಷೆ ನೀಡಬೇಡಿ' ಎಂದು ಅಖಂಡ ಅವರು ಪೊಲೀಸರಿಗೆ ತಿಳಿಸಿದ್ಧಾರೆ. 

ಗಲಭೆಕೋರರ ವಿರುದ್ಧ ರಾಜ್ಯ ಸರ್ಕಾರ ದಿಟ್ಟ ತೀರ್ಮಾನ, ಆಸ್ತಿ ಮುಟ್ಟುಗೋಲು!