ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 3 ನೇ ಅಲೆ ಅಪಾಯಕಾರಿ: ತಜ್ಞರ ಎಚ್ಚರಿಕೆ

May 31, 2021, 12:24 PM IST

ಬೆಂಗಳೂರು (ಮೇ. 31): 3 ನೇ ಅಲೆ ಮಕ್ಕಳಿಗೆ ಅಪಾಯ ಎನ್ನಲಾಗುತ್ತಿದೆ. ಆದರೆ ಅದಕ್ಕೂ ಮುನ್ನವೇ ಮಕ್ಕಳಿಗೆ ಸೋಂಕು ತಗುಲಿತ್ತಿದೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ತಗಲುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ 4.43 ಲಕ್ಷ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಲಸಿಕೆ ಜೊತೆಗೆ ಪೌಷ್ಠಿಕ ಆಹಾರ ಕೊಡುವ ಕಡೆಯೂ ಸರ್ಕಾರ ಗಮನ ಕೊಡಬೇಕಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 

ಮೈಸೂರಿನಲ್ಲಿ 60 ಮಕ್ಕಳ ಮೇಲೆ ಕೊವ್ಯಾಕ್ಸಿನ್ ಪ್ರಯೋಗಕ್ಕೆ ನಿರ್ಧಾರ