ಕೊರೋನಾ ವಾರಿಯರ್ಸ್‌ ಜೀವಕ್ಕೆ ಬೆಲೆ ಇಲ್ವಾ? ಸಿಎಂ ಸಾಹೇಬ್ರೆ ಸ್ವಲ್ಪ ಈ ಸ್ಟೋರಿ ನೋಡಿ..!

Jul 10, 2020, 10:50 AM IST

ಬೆಂಗಳೂರು(ಜು.10): ಇದು ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ನೋಡಲೇಬೇಕಾದ ಸ್ಟೋರಿ. ಯಾಕೆಂದ್ರೆ ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳಿಗೆ ಬೇಕಾದ ಅಗತ್ಯ ಸೌಕರ್ಯಗಳು ಸಿಗುತ್ತಿಲ್ಲ.

ಬೆಂಗ್ಳೂರಲ್ಲಿ ಸಾವು ಹೆಚ್ಚಾಗಲು BBMP ಕಾರಣ..!

ಕೊರೋನಾ ವಾರಿಯರ್ಸ್‌ಗಳಾದ ಡಾಕ್ಟರ್ಸ್‌ಗಳಿಗೆ ಮಾಸ್ಕ್, ಫೇಸ್‌ಶೀಲ್ಡ್‌ಗಳು ಸರಿಯಾಗಿ ಸಿಗುತ್ತಿಲ್ಲ. ಇದು ಪ್ರತಿಷ್ಠಿತ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಪಾಡು. ಪಿಪಿಇ ಕಿಟ್, ಮಾಸ್ಕ್, ಫೇಸ್ ಶೀಲ್ಡ್‌ಗಳನ್ನು ಡಾಕ್ಟರ್ಸ್‌ ತರಬೇಕಂತೆ. ಹಾಗಾದರೆ ಜೀವದ ಹಂಗು ತೊರೆದು ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಪಾಡನ್ನು ಕೇಳೋರು ಯಾರು? ಸಂಬಂಧಪಟ್ಟವರು ಈಗಲಾದರೂ ಗಮನಹರಿಸಿ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.