ಸಿಎಂ ಬದಲಾವಣೆ ವಿಚಾರಕ್ಕಾಗಿ ದೆಹಲಿಗೆ ಬಂದಿಲ್ಲ, ಚರ್ಚೆಗೆ ತೆರೆ ಎಳೆದ ಅರವಿಂದ್ ಬೆಲ್ಲದ್

Jun 12, 2021, 3:30 PM IST

ಬೆಂಗಳೂರು (ಜೂ. 12): ಶಾಸಕ ಅರವಿಂದ್ ಬೆಲ್ಲದ್ ದಿಢೀರ್ ದೆಹಲಿ ಭೇಟಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು.' ಸಿಎಂ ಬದಲಾವಣೆ ವಿಚಾರಕ್ಕಾಗಿ ದೆಹಲಿಗೆ ಬಂದಿಲ್ಲ. ದೆಹಲಿ ಭೇಟಿ ಹಿಂದೆ ರಾಜಕೀಯ ಉದ್ದೇಶ ಇಲ್ಲ' ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಸ್ಪಷ್ಟನೆ ಕೊಟ್ಟಿದ್ಧಾರೆ.  'ನನ್ನ ಖಾಸಗಿ ಕಾರ್ಯಕ್ರಮದ ವಿಚಾರವಾಗಿ ದೆಹಲಿಗೆ ಬಂದಿದ್ದೇವೆ. ಅನಗತ್ಯ ಗೊಂದಲ ಬೇಡ' ಎಂದು ಚರ್ಚೆಗೆ ತೆರೆ ಎಳೆದಿದ್ದಾರೆ.