ಯುಗಾದಿಗೆ ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬಿಟ್ಹಾಕಿ, ನಿಮ್ಮಿಂದ ಹಳ್ಳಿಗಳಿಗೂ ಹರಡಬಹುದು ವೈರಸ್!

Apr 4, 2021, 10:59 AM IST

ಬೆಂಗಳೂರು (ಏ. 04): ಒಂದು ಕಡೆ ಕೊರೊನಾ ಸೋಂಕು ಏರಿಕೆಯಾಗುತ್ತಲೇ ಇದೆ. ಇನ್ನೊಂದು ಕಡೆ ಯುಗಾದಿ ಹಬ್ಬ ಬಂದಿದೆ. ಹಬ್ಬ ಎಂದರೆ ಜನ ಮಾರುಕಟ್ಟೆಗೆ, ಆಚರಣೆಗೆ ಒಂದು ಕಡೆ ಸೇರುವುದು ಸಾಮಾನ್ಯ. ಆದರೆ ಈ ಬಾರಿ ಹಾಗೆ ಮಾಡಲಾಗುವುದಿಲ್ಲ. ಮೈಮರೆತರೆ ಅಪಾಯವನ್ನು ಆಹ್ವಾನಿಸಿದಂತಾಗುವುದು. ಹಾಗಾಗಿ ಮನೆಯಲ್ಲಿಯೇ ಸರಳವಾಗಿ ಆಚರಿಸುವುದು ಉತ್ತಮ ಎಂದು ತಜ್ಞರು ಎಚ್ಚರಿಸಿದ್ದಾರೆ.

ಏಪ್ರಿಲ್ 15 ಕ್ಕೆ 2 ನೇ ಅಲೆ ಗರಿಷ್ಠ, ಮೇ ಅಂತ್ಯಕ್ಕೆ ಇಳಿಕೆ; ರೂಲ್ಸ್ ಫಾಲೋ ಮಾಡದಿದ್ರೆ ಗಂಡಾಂತರ! 

ಇನ್ನು ಹಬ್ಬಕ್ಕೆಂದು ಬೆಂಗಳೂರಿನಿಂದ ಊರಿನ ಕಡೆ ಹೋಗುವವರು ಸದ್ಯಕ್ಕೆ ಹೋಗದಿರುವುದು ಉತ್ತಮ. ಹಳ್ಳಿಗಳಲ್ಲೂ ವೈರಸ್ ಹಬ್ಬುವ ಸಾಧ್ಯತೆ ಇದೆ ಎಂದು ಡಾ. ಮಂಜುನಾಥ್ ಎಚ್ಚರಿಸಿದ್ದಾರೆ.