News Hour Special: ಹಿಂದೂ ಹಿತಕ್ಕೆ ಧಕ್ಕೆ ತಂದರೆ ಸಹಿಲಿಲ್ಲ: ಜಗದೀಶ್ ಕಾರಂತ 'ಬೆಂಕಿ' ಮಾತು

Dec 23, 2022, 5:12 PM IST

ಹಿಂದೂ ಜಾಗರಣ ವೇದಿಕೆ ಹುಟ್ಟಿಕೊಂಡಿರುವುದೇ, ಹಿಂದೂಗಳ ರಕ್ಷಣೆಗಾಗಿ ಎಂದು ಜಗದೀಶ್ ಕಾರಂತ ಹೇಳಿದ್ದಾರೆ. ಹಿಂದೂತ್ವ, ಹಿಂದೂ ಸಮಾಜದ ಮೇಲೆ ಆಕ್ರಮಣಗಳು, ಅನ್ಯಾಯಗಳು ಹಾಗೂ ಅಪಮಾನಗಳು ನಡೆದಾಗ ನಮ್ಮ ಸಂಘಟನೆ ಸಿಟ್ಟಿಗೇಳುತ್ತದೆ. ನಾನು ಸಿಟ್ಟಿಗೇಳದೆ ಸಮಾಜವನ್ನು ಹೇಗೆ ಜಾಗೃತಿ ಗೊಳಿಸುವುದು?. ಹಾಗಾಗಿ ಅನ್ಯಾಯ ಕಂಡಾಗ ಸಿಟ್ಟಿಗೇಳುವವನು ಮತ್ತು ಸಮಾಜವನ್ನು ಕೆರಳಿಸುವವನು ನಾನು ಎಂದು ಹೇಳಿದ್ದಾರೆ. ಹಿಂದೂ ಹಿತಕ್ಕೆ ಧಕ್ಕೆ ತರುವ ಕೃತ್ಯಗಳನ್ನು ಯಾರೇ ಎಸಗಿದರು ಅದನ್ನು ಖಂಡಿಸುವುದರಲ್ಲಿ ಹಿಂದೂ ಜಾಗರಣ ವೇದಿಕೆ ಮೊದಲು. ಸರ್ಕಾರ ಕೃಪೆ ಸರ್ಕಾರದ ಭೀಕ್ಷೆ ಸರ್ಕಾರ ಹಂಗಿನಲ್ಲಿ ಹಿಂದೂ ಚಳುವಳಿಗಳು ನಡೆಯಬಾರದು ಎನ್ನುವ ವಿಚಾರದ ಪ್ರಬಲ ಪ್ರತಿಕಾರಕ ನಾನು ಎಂದು ಜಗದೀಶ್ ಕಾರಂತ ಹೇಳಿದ್ದಾರೆ.

ಹಾವೇರಿ ಜಿಲ್ಲಾ ಪೊಲೀಸರ ಭರ್ಜರಿ ಬೇಟೆ, ನಾಲ್ವರು ಅಂತರ್ ರಾಜ್ಯ ದರೋಡೆಕೋರರ ಬಂಧನ