ಆಟೋ ಚಾಲಕರಿಂದ  'ನಮ್ಮ ಯಾತ್ರಿ' ಆ್ಯಪ್‌ ಬಿಡುಗಡೆಗೆ ಸಿದ್ಧತೆ!

ಆಟೋ ಚಾಲಕರಿಂದ 'ನಮ್ಮ ಯಾತ್ರಿ' ಆ್ಯಪ್‌ ಬಿಡುಗಡೆಗೆ ಸಿದ್ಧತೆ!

Published : Oct 10, 2022, 12:34 PM IST

ತಮ್ಮದೇ ಆದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್, "ನಮ್ಮ ಯಾತ್ರಿ" ಅನ್ನು ಅಭಿವೃದ್ಧಿಪಡಿಸುವ ಮೂಲಕ, ಬೆಂಗಳೂರಿನ ಆಟೋ ಯೂನಿಯನ್‌ಗಳು ಒಲಾ ಮತ್ತು ಉಬರ್‌ನಂತಹ ಅಗ್ರಿಗೇಟರ್‌ಗಳು ಮತ್ತು ರೈಡ್‌ ಕಂಪನಿಗಳಿಗೆ ಸವಾಲೊಡ್ಡಲು ಬಯಸಿದೆ.
 

ಬೆಂಗಳೂರು (ಅ.10): ಒಲಾ, ಉಬರ್‌ ಹಾಗೂ ರಾಪಿಡೋ ಅಪ್ಲಿಕೇಶನ್‌ಗಳಿಗೆ ಸೆಡ್ಡು ಹೊಡೆಯಲು ಬಯಸಿರುವ ಆಟೋ ಯೂನಿಯನ್‌ಗಳು ತಮ್ಮದೇ ಆದ ನಮ್ಮ ಯಾತ್ರಿ ಆ್ಯಪ್‌ ಬಿಡುಗಡೆಗೆ ಸಿದ್ಧತೆ ಆರಂಭಿಸಿದೆ. ಆಟೋ ರಿಕ್ಷಾ ಚಾಲಕರ ಸಂಘ (ಎಆರ್‌ಡಿಯು) ನವೆಂಬರ್‌ 1 ರಂದು ಈ ಆ್ಯಪ್‌ಅನ್ನು ಬಿಡುಗಡೆ ಮಾಡಲಿದೆ. ಇನ್ಫೋಸಿಸ್‌ ಕೋ ಫೌಂಡೇಷನ್‌ ನಂದನ್‌ ನಿಲಕೇಣಿ ಬೆಂಬಲಿತ ಬೆಕನ್‌ ಫೌಂಡೇಷನ್‌ ಈ ಆ್ಯಪ್‌ಅನ್ನು ತಯಾರಿಸಲಿದೆ ಎನ್ನಲಾಗಿದೆ.

ಸರ್ಕಾರ ನಿಗದಿ ಮಾಡಿದಷ್ಟೇ ದರವನ್ನು ಈ ಆ್ಯಪ್‌ ಹೊಂದಿರಲಿದೆ. ಇದರ ಅನ್ವಯ ಪ್ರತಿ ಎರಡು ಕಿಲೋಮೀಟರ್‌ಗೆ  30 ರೂಪಾಯಿ ಮಾತ್ರವೇ ಚಾರ್ಜ್‌ ಇರಲಿದೆ. ಅದರೊಂದಿಗೆ ಬುಕ್ಕಿಂಗ್‌ ಚಾರ್ಜ್‌ ಆಗಿ 10 ರೂಪಾಯಿ ಇರಲಿದೆ. ಈ ಬುಕ್ಕಿಂಗ್‌ ಚಾರ್ಜ್‌ ಅನ್ವಯ ನೀವು ಬುಕ್‌ ಮಾಡಿದ ಸ್ಥಳಕ್ಕೆ ಆಟೋ ಬರಲಿದೆ. ನಿಗದಿತ ದೂರಕ್ಕಿಂತ ಇನ್ನೂ ದೂರ ಸಂಚಾರಕ್ಕೆ 1 ಕಿಲೋಮೀಟರ್‌ಗೆ 15 ರೂಪಾಯಿ ನಿಗದಿಯಾಗಲಿದೆ. 

ಓಲಾ, ಉಬರ್ ಕಂಪನಿಗಳ ಕಳ್ಳಾಟಕ್ಕೆ ಇಂದೇ ಬೀಳುತ್ತಾ ಬ್ರೇಕ್..?

ಓಲಾ, ಉಬರ್ ಕಂಪನಿಗಳಿಗೆ 2016ರ ನಿಯಮದ ಅಡಿಯಲ್ಲಿ ಟ್ಯಾಕ್ಸಿಗಳನ್ನು ಮಾತ್ರ ಓಡಿಸಲು ಪರವಾನಗಿ ಇತ್ತು. ನಿಯಮ ಗಾಳಿಗೆ ತೂರಿದ ಕಂಪನಿಗಳು ಟ್ಯಾಕ್ಸಿ ಜೊತೆ ಆಟೋ ಸೇವೆ ನೀಡಲು ಕೂಡ ಆರಂಭಿಸಿದ್ದವು. ಹಾಗಿದ್ದರೂ ಈ ಕಂಪನಿಗಳು ಅಕ್ರಮವಾಗಿ ವ್ಯವಹಾರ ನಡೆಸುತ್ತಿದ್ದವು.

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more