ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?

ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?

Published : Feb 04, 2026, 05:29 PM IST

ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಶತಮಾನಗಳಷ್ಟು ಹಳೆಯದಾದ ನಿಗೂಢ ಸುರಂಗ ಮಾರ್ಗಗಳಿವೆ. ರಾಜರ ಕಾಲದಿಂದ ಬ್ರಿಟಿಷರವರೆಗೆ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿದೆ ಎಂದು ಸ್ಥಳೀಯರು ಬಲವಾಗಿ ನಂಬಿದ್ದರೂ, ಅಧಿಕೃತ ದಾಖಲೆಗಳಲ್ಲಿ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. 

ಇವತ್ತು ನಿಮಗೊಂದು ಸಿನಿಮಿಯಾ ಸ್ಟೋರಿಯೊಂದನ್ನು ಹೇಳುತ್ತಿದ್ದೇವೆ. ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ನಿಗೂಢ ಹಾಗೂ ದುರ್ಗಮವಾದ ಸುರಂಗ ಮಾರ್ಗಗಳು ಶತಮಾನಗಳ ಕಾಲದಿಂದಲೂ ಇವೆ. ಏಕಿವೆ ಅನ್ನೋದನ್ನ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಹೌದು, ರಾಜ ಮಹರಾಜರುಗಳ ಕಾಲದಿಂದಲೂ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿದೆ. ಬ್ರಿಟಿಷರು ಕೂಡ ಇಲ್ಲಿ ಸಾಕಷ್ಟು ಚಿನ್ನವನ್ನು ಕೆರೆದುಕೊಂಡು ಹೋಗಿದ್ದಾರೆ. ಆದ್ರೆ, ನಮ್ಮ ಅಧಿಕೃತ ದಾಖಲೆಗಳಲ್ಲಿ ಮಾತ್ರ ಇಲ್ಲೊಂದು ಗಣಿಗಾರಿಕೆ ನಡೆದಿತ್ತು. ಚಿನ್ನದ ನಿಕ್ಷೇಪವಿತ್ತು ಅನ್ನೋ ಮಾಹಿತಿ ಇಲ್ಲ. ಆದ್ರೆ, ಸುವರ್ಣ ನ್ಯೂಸ್​​​ ಆ ದುರ್ಗಮ ಸುರಂಗವನ್ನು ಹೊಕ್ಕು ಅದ್ರೊಳಗೆ ಏನಿದೆ ಅನ್ನೋದನ್ನ ಪತ್ತೆ ಮಾಡಿದೆ. ಆ ಡೀಟೈಲ್​​ ಇಲ್ಲಿದೆ ನೋಡಿ

ಕಪ್ಪತಗುಡ್ಡ ಅರಣ್ಯ ಪ್ರದೇಶ ಸೇರಿದಂತೆ ಇಲ್ಲಿನ ಸುತ್ತಮೂತ್ತಲೂ ಸಾಕಷ್ಟು ಕಡೆಗಳಲ್ಲಿ ಚಿನ್ನದ ನಿಕ್ಷೇಪಗಳು ಇವೆಯಂತೆ. ಕಣಿವೆಹೊಸೂರಿನಲ್ಲಿಯೂ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತು ಅಂತ ಇಲ್ಲಿನ ಜನ್ರು ಹೇಳ್ತಾರೆ. ಯಾರೋ ಒಬ್ರು ಇಬ್ರು ಹೇಳಿದ್ರೆ, ಈ ಮಾತನ್ನು ಅಲ್ಲಗಳೆಯ ಬಹುದಿತ್ತು. ಆದ್ರೆ, ಇಲ್ಲಿನ ಮನೆಮನೆಯಲ್ಲೂ ಹಿರಿಯರು ಇದೇ ಮಾತುಗಳನ್ನು ಇಲ್ಲಿನ ಜನ್ರಿಗೆ ಹೇಳಿಕೊಂಡು ಬಂದಿದ್ದಾರೆ. ಹೀಗಾಗಿ ಇಲ್ಲಿನ ಜನ್ರು ಈ ವಿಷ್ಯವನ್ನು ಪ್ರಬಲವಾಗಿ ನಂಬ್ಕೊಂಡು ಬಂದಿದ್ದಾರೆ.
 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more