ಕೊಡಗು: 'ನಮಗೆ ವ್ಯಾಕ್ಸಿನ್ ಬೇಡ' ಮನವೊಲಿಕೆಗೂ ಬಗ್ಗದ ಬಸವನಹಳ್ಳಿ ಗ್ರಾಮದ ಆದಿವಾಸಿಗಳು

Jun 27, 2021, 9:16 AM IST

ಬೆಂಗಳೂರು (ಜೂ. 27): ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುತ್ತಿದ್ದರೂ ಲಸಿಕೆ ಹಾಕಿಸಿಕೊಳ್ಳದೇ ಜನ ಓಡಾಡುತ್ತಿದ್ದಾರೆ.  ಹಾಕಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ ಕೊಡಗು ಜಿಲ್ಲೆ ಬಸವನಹಳ್ಳಿ ಗ್ರಾಮದಲ್ಲಿ ಆದಿವಾಸಿಗಳು ಹಠ ಮುಂದುವರೆಸಿದ್ಧಾರೆ. 

ಕರ್ನಾಟಕದ 15.40 ಲಕ್ಷ ಮಂದಿಗೆ ಕಾಡಲಿದೆ ಕೊರೋನಾ 3 ನೇ ಅಲೆ; ಎಚ್ಚರಿಕರ ನೀಡಿದ ತಜ್ಞರ ವರದಿ!

ಮೂರನೇ ಅಲೆ ಬರುವ ಮೊದಲು ಸರ್ಕಾರ ಎಚ್ಚೆತ್ತುಕೊಂಡಿದೆ. ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ಜಿಲ್ಲೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳನ್ನು ಹೆಚ್ಚಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 25-50 ಕ್ಕೆ ಐಸಿಯು ಬೆಡ್ ಏರಿಕೆ, ತಾಲ್ಲೂಕು ಆಸ್ಪತ್ರೆಗಳಲ್ಲಿ 50-100 ಕ್ಕೆ ಬೆಡ್‌ ಹೆಚ್ಚಿಸಲಾಗಿದೆ.