Mangaluru: ಸುರತ್ಕಲ್ ಸರ್ಕಲ್‌ಗೆ ಸಾವರ್ಕರ್ ಹೆಸರು: ಕಾಂಗ್ರೆಸ್ ತೀವ್ರ ಆಕ್ಷೇಪ, ಹೋರಾಟದ ಎಚ್ಚರಿಕೆ

Nov 7, 2021, 10:53 AM IST

ಮಂಗಳೂರು (ನ. 07): ಸುರತ್ಕಲ್ ಜಂಕ್ಷನ್‌ಗೆ (Surathkal Junction)  ವೀರ ಸಾವರ್ಕರ್ ಹೆಸರಿಡಲು (Veer Savarkar) ವಿರೋಧ ವ್ಯಕ್ತವಾಗಿದೆ. ಸುರತ್ಕಲ್ ಸರ್ಕಲ್‌ಗೆ ವೀರ ಸಾವರ್ಕರ್ ಹೆಸರಿಟ್ಟು, ಪುತ್ಥಳಿ ನಿರ್ಮಿಸುವುದಾಗಿ ಮಂಗಳೂರು ಮೇಯರ್ ಹಾಗೂ ಆಯುಕ್ತರಿಗೆ ಶಾಸಕ ಭರತ್ ಶೆಟ್ಟಿ (Bharat Shetty) ಮನವಿ ಸಲ್ಲಿಸಿದ್ದರು. ಶಾಸಕರ ಮನವಿಯನ್ನು ಮೇಯರ್ ಪುರಸ್ಕರಿಸಿದ್ದರು. ಆದರೆ ಕಾಂಗ್ರೆಸ್ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಸಾವರ್ಕರ್ ಹೆಸರಿಟ್ರೆ ಉಗ್ರ ಹೋರಾಟ ಮಾಡುವುದಾಗಿ ಎಸ್‌ಡಿಪಿಐ ಎಚ್ಚರಿಕೆ ನೀಡಿದೆ. ಇನ್ನು ಶಾಸಕ ಭರತ್ ಶೆಟ್ಟಿ ಹಿಂದೂಪರ ಸಂಘಟನೆಗಳು ನಿಂತಿವೆ. ಸುರತ್ಕಲ್ ಜಂಕ್ಷನ್‌ಗೆ ಸಾವರ್ಕರ್ ಹೆಸರಿಡಲು ಆಗ್ರಹಿಸಿವೆ. 

ಗಡಿಯಂಚಿನಲ್ಲಿ ಸೈನಿಕರೊಂದಿಗೆ ಮೋದಿ ದೀಪಾವಳಿ, ಏನಿದರ ಹಿಂದಿನ ಸೀಕ್ರೆಟ್.?