ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆಗೂ 10 ನಿಮಿಷ ಮೊದಲು ನಡೆದಿದ್ದೇನು?

Dec 17, 2020, 4:47 PM IST

ಬೆಂಗಳೂರು (ಡಿ. 17): ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಅಪ್‌ಡೇಟ್ಸ್ ಸಿಗುತ್ತಿದೆ. ಮೂವರು ಸ್ನೇಹಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮನು, ಧರ್ಮೇಗೌಡ ಹಾಗೂ ಪ್ರಜ್ವಲ್ ಮೇಲೆ ಅನುಮಾನ ವ್ಯಕ್ತವಾಗಿದೆ. 

ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆಗೆ ಟ್ವಿಸ್ಟ್; ಸ್ನೇಹಿತರ ಮೇಲೆಯೇ ಪೊಲೀಸರ ಕಣ್ಣು

ನಿನ್ನೆ ರಾತ್ರಿ 10 ಗಂಟೆಯ ಪಾರ್ಟಿ ವೇಳೆ ಲಕ್ಷ್ಮೀ ಹಾಗೂ ಸ್ನೇಹಿತ ಮನು ನಡುವೆ ಸಾಕಷ್ಟು ಮಾತುಕತೆಯಾಗಿದೆ ಎನ್ನಲಾಗಿದೆ. ಬಳಿಕ ಕೋಪಿಸಿಕೊಂಡು ರೂಮಿಗೆ ಹೊದ ಲಕ್ಷ್ಮೀ 10 ನಿಮಿಷವಾದರೂ ಬಾಗಿಲು ತೆಗೆಯಲಿಲ್ಲ. ಅಲ್ಲಿಯೇ ಆತ್ಮಹತ್ಯೆಗೆ ಶರಣಾಗುತ್ತಾರೆ. ನಂತರ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅಷ್ಟೊತ್ತಿಗಾಗಲೇ ಸಾವನ್ನಪ್ಪಿರುತ್ತಾರೆ. ಹಾಗಾದರೆ ಆ 10 ನಿಮಿಷದಲ್ಲಿ ನಡೆದಿದ್ದೇನು? ಲಕ್ಷ್ಮಿ ಹಾಗೂ ಮನು ನಡುವೆ ನಡೆದ ಮಾತುಕತೆಯೇನು? ಇಲ್ಲಿದೆ ಹೆಚ್ಚಿನ ಅಪ್‌ಡೇಟ್ಸ್..!