ವಿಶ್ವಕರ್ಮ ಜನಾಂಗ ಅಭಿವೃದ್ಧಿ ನಿಗಮಕ್ಕೆ ನೆರವಾಗಿ: ಸರ್ಕಾರಕ್ಕೆ ಕೆ ಪಿ ನಂಜುಂಡಿ ಆಗ್ರಹ

Aug 16, 2020, 5:51 PM IST

ಬೆಂಗಳೂರು (ಆ. 16): ವಿಶ್ವಕರ್ಮ ಜನಾಂಗ ಅಭಿವೃದ್ಧಿ ಮಂಡಳಿಯಿಂದ ಪಡೆದ ಸಾಲವನ್ನು ಮನ್ನಾ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ, ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ ಪಿ ನಂಜುಂಡಿ ಒತ್ತಾಯಿಸಿದ್ದಾರೆ. 

ವಿಶ್ವಕರ್ಮ ಸಮಾಜ ಆರ್ಥಿಕ ಸಂಕಷ್ಟದಲ್ಲಿದೆ. ನಿಗಮದ 85 ಕೋಟಿ ಸಾಲವನ್ನು ಮನ್ನಾ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಸರ್ಕಾರ ಬೇರೆ ಬೇರೆ ಸಮುದಾಯದವರಿಗೆ ನೆರವು ನೀಡಿದೆ. ಸಾಲ ಮನ್ನಾ ಮಾಡಿದೆ. ಅದರಂತೆ ವಿಶ್ವಕರ್ಮ ಸಮಾಜದ ಸಾಲ ಮನ್ನಾ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.