Jul 31, 2023, 11:06 PM IST
ಕರ್ನಾಟಕದ ಜೈಲುಗಳು ಉಗ್ರರ ತರಬೇತಿ ಕೇಂದ್ರಗಳಾಗುತ್ತಿದೆಯಾ ಅನ್ನೋ ಪ್ರಶ್ನೆ ಇದೀಗ ಶುರುವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಶಂಕಿತರ ಭಯೋತ್ವಾದಕರ ಬಂಧನವಾಗಿತ್ತು. ಇವರು ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋದ ಆರೋಪಿಗಳು ಉಗ್ರರರಾಗಿ ಜೈಲಿನಿಂದ ಹೊರಬಂದು ವಿಧ್ವಂಸಕ ಕೃತ್ಯಕ್ಕೆ ತಯಾರಿ ಮಾಡುವಾಗಲೇ ಬಂಧನಕ್ಕೊಳಗಾಗಿದ್ದಾರೆ. ಇದೇ ರೀತಿ ಕ್ರಿಮಿನಲ್ ಆಗಿ ಜೈಲಿಗೆ ಹೋಗಿ ಉಗ್ರರಾಗಿ ಹೊರಬಂದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ ಪ್ರಕರಣದ ಉಗ್ರ ಶಾರೀಕ್ಗೆ ಬಾಂಬ್ ಇಡಲು ಕಲಿಸಿದ್ದು ಬೆಳಗಾವಿಯ ಹಿಂಡಲಗ ಜೈಲಿನಲ್ಲಿದ್ದ ಉಗ್ರ ಅಫ್ಸರ್ ಫಾಶ. ಈ ಮೂಲಕ ಕರ್ನಾಟಕದ ಜೈಲುಗಳು ಉಗ್ರರ ಉತ್ಪಾದಕರ ಕೇಂದ್ರಗಳಾಗುತ್ತಿದೆ.