ಸಾಹುಕಾರ್‌ಗೆ ಬಿಗ್ ಶಾಕ್, ತಿರುಗಿ ಬಿದ್ದ ಸೀಡಿ ಯುವತಿಯಿಂದ ದೂರು!

ಸಾಹುಕಾರ್‌ಗೆ ಬಿಗ್ ಶಾಕ್, ತಿರುಗಿ ಬಿದ್ದ ಸೀಡಿ ಯುವತಿಯಿಂದ ದೂರು!

Published : Mar 26, 2021, 12:48 PM ISTUpdated : Mar 26, 2021, 01:45 PM IST

ಸೀಡಿ ಲೇಡಿ ಮೂರನೇ ವಿಡಿಯೋ ರಿಲೀಸ್ ಮಾಡಿ, ತಾನು ಇಂದು(ಶುಕ್ರವಾರ) ಮಧ್ಯಾಹ್ನ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ. ಇದು ಬೆಳಗಾವಿಯ ಸಾಹುಕಾರ್‌ಗೆ ಬಿಗ್ ಶಾಕ್ ನೀಡಿದೆ.

ಬೆಂಗಳೂರು(ಮಾ.26): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಒಂದೆಡೆ ಸಾಹುಕಾರ್ ವಿಡಿಯೋದಲ್ಲಿರುವುದು ತಾವಲ್ಲ, ತನ್ನ ವಿರುದ್ಧ ನಡೆದ ಷಡ್ಯಂತ್ರ ಎನ್ನುತ್ತಿದ್ದಾರೆ. ಇತ್ತ ಮತ್ತೊಂದೆಡೆ ಸಿಡಿ ಗ್ಯಾಂಗ್ ಕೂಡಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಇವೆಲ್ಲದರ ನಡುವೆಯೇ ಸಿಡಿಯಲ್ಲಿದ್ದ ಯುವತಿ ಎರಡು ಬಾರಿ ವಿಡಿಯೋ ರಿಲೀಸ್ ಮಾಡಿ ಸಂಚಲನ ಮೂಡಿಸಿದ್ದರು. ಆದರೀಗ ಮೂರನೇ ವಿಡಿಯೋ ರಿಲೀಸ್ ಮಾಡಿ, ತಾನು ಇಂದು(ಶುಕ್ರವಾರ) ಮಧ್ಯಾಹ್ನ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ. ಇದು ಬೆಳಗಾವಿಯ ಸಾಹುಕಾರ್‌ಗೆ ಬಿಗ್ ಶಾಕ್ ನೀಡಿದೆ.

SIT ಗೆ ಹೊಸ ನಂಬರ್ ಕೊಟ್ಟು ಯಾಮಾರಿಸಿದ್ರಾ ಜಾರಕಿಹೊಳಿ...?

ಹೌದು ಸೋಶಿಯಲ್ ಮಿಡಿಯಾದಲ್ಲಿ ಮೂರನೇ ಬಾರಿ ವಿಡಿಯೋ ಮೂಲಕ ಕಾಣಿಸಿಕೊಂಡಿರುವ ಯುವತಿ ತಾನು ಅಜ್ಞಾತವಾಸ ಮುಗಿಸಿ ಪೊಲೀಸರೆದುರು ಹಾಜರಾಗುತ್ತೇನೆ. ರಮೇಶ್ ಜಾರಕಿಹೊಳಿ ವಿರುದ್ಧ ವಕೀಲ ಜಗದೀಶ್ ಮೂಲಕ ಇವತ್ತು ಮಧ್ಯಾಹ್ನ ಎರಡು ಗಂಟೆಗೆ ದೂರು ನೀಡುತ್ತೇನೆ. 24 ದಿನದಿಂದ ಜೀವ ಭಯದಿಂದ ಬದುಕುತ್ತಿದ್ದೆ.  ಆದರೀಗ ಎಲ್ಲೋ ಒಂದು ಕಡೆ ಧೈರ್ಯ ಬಂದಿದೆ ಎಂದಿದ್ದಾರೆ.

2ನೇ ವಿಡಿಯೋ ರಿಲೀಸ್ ಮಾಡಿ ಪೊಲೀಸರಿಗೆ ಪ್ರಶ್ನೆ; ಹೊಸ ವರಸೆ ತೆಗೆದೆ CD ಯುವತಿ!

ಸದ್ಯ ಜಾರಕಿಹೊಳಿ ವಿರುದ್ಧವೇ ತಿರುಗಿ ಬಿದ್ದಿರುವ ಸೀಡಿ ಯುವತಿ, ದೂರಿನ ಪ್ರತಿ ಬರೆಯುತ್ತಿರುವ ಫೋಟೋ ಕೂಡಾ ಲಭ್ಯವಾಗಿದೆ. ಅದೇನಿದ್ದರೂ ಸದ್ಯ ಕಳೆದ ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಹೈಡ್ರಾಮಾ ಇಂದು ತಾರ್ಕಿಕ ಅಂತ್ಯ ಕಾಣುತ್ತಾ ಅಥವಾ ಸಿಡಿ ಗ್ಯಾಂಗ್ ಹಾಗೂ ಯುವತಿ ತಮ್ಮ ಅಜ್ಞಾತವಾಸ ಮುಂದುವರೆಸುತ್ತಾರಾ ಎಂಬುವುದಕ್ಕೆ ಇಂದು ಮಧ್ಯಾಹ್ನ ಉತ್ತರ ಸಿಗಲಿದೆ.  

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!