ಸಾಹುಕಾರ್‌ಗೆ ಬಿಗ್ ಶಾಕ್, ತಿರುಗಿ ಬಿದ್ದ ಸೀಡಿ ಯುವತಿಯಿಂದ ದೂರು!

ಸಾಹುಕಾರ್‌ಗೆ ಬಿಗ್ ಶಾಕ್, ತಿರುಗಿ ಬಿದ್ದ ಸೀಡಿ ಯುವತಿಯಿಂದ ದೂರು!

Published : Mar 26, 2021, 12:48 PM ISTUpdated : Mar 26, 2021, 01:45 PM IST

ಸೀಡಿ ಲೇಡಿ ಮೂರನೇ ವಿಡಿಯೋ ರಿಲೀಸ್ ಮಾಡಿ, ತಾನು ಇಂದು(ಶುಕ್ರವಾರ) ಮಧ್ಯಾಹ್ನ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ. ಇದು ಬೆಳಗಾವಿಯ ಸಾಹುಕಾರ್‌ಗೆ ಬಿಗ್ ಶಾಕ್ ನೀಡಿದೆ.

ಬೆಂಗಳೂರು(ಮಾ.26): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಒಂದೆಡೆ ಸಾಹುಕಾರ್ ವಿಡಿಯೋದಲ್ಲಿರುವುದು ತಾವಲ್ಲ, ತನ್ನ ವಿರುದ್ಧ ನಡೆದ ಷಡ್ಯಂತ್ರ ಎನ್ನುತ್ತಿದ್ದಾರೆ. ಇತ್ತ ಮತ್ತೊಂದೆಡೆ ಸಿಡಿ ಗ್ಯಾಂಗ್ ಕೂಡಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಇವೆಲ್ಲದರ ನಡುವೆಯೇ ಸಿಡಿಯಲ್ಲಿದ್ದ ಯುವತಿ ಎರಡು ಬಾರಿ ವಿಡಿಯೋ ರಿಲೀಸ್ ಮಾಡಿ ಸಂಚಲನ ಮೂಡಿಸಿದ್ದರು. ಆದರೀಗ ಮೂರನೇ ವಿಡಿಯೋ ರಿಲೀಸ್ ಮಾಡಿ, ತಾನು ಇಂದು(ಶುಕ್ರವಾರ) ಮಧ್ಯಾಹ್ನ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ. ಇದು ಬೆಳಗಾವಿಯ ಸಾಹುಕಾರ್‌ಗೆ ಬಿಗ್ ಶಾಕ್ ನೀಡಿದೆ.

SIT ಗೆ ಹೊಸ ನಂಬರ್ ಕೊಟ್ಟು ಯಾಮಾರಿಸಿದ್ರಾ ಜಾರಕಿಹೊಳಿ...?

ಹೌದು ಸೋಶಿಯಲ್ ಮಿಡಿಯಾದಲ್ಲಿ ಮೂರನೇ ಬಾರಿ ವಿಡಿಯೋ ಮೂಲಕ ಕಾಣಿಸಿಕೊಂಡಿರುವ ಯುವತಿ ತಾನು ಅಜ್ಞಾತವಾಸ ಮುಗಿಸಿ ಪೊಲೀಸರೆದುರು ಹಾಜರಾಗುತ್ತೇನೆ. ರಮೇಶ್ ಜಾರಕಿಹೊಳಿ ವಿರುದ್ಧ ವಕೀಲ ಜಗದೀಶ್ ಮೂಲಕ ಇವತ್ತು ಮಧ್ಯಾಹ್ನ ಎರಡು ಗಂಟೆಗೆ ದೂರು ನೀಡುತ್ತೇನೆ. 24 ದಿನದಿಂದ ಜೀವ ಭಯದಿಂದ ಬದುಕುತ್ತಿದ್ದೆ.  ಆದರೀಗ ಎಲ್ಲೋ ಒಂದು ಕಡೆ ಧೈರ್ಯ ಬಂದಿದೆ ಎಂದಿದ್ದಾರೆ.

2ನೇ ವಿಡಿಯೋ ರಿಲೀಸ್ ಮಾಡಿ ಪೊಲೀಸರಿಗೆ ಪ್ರಶ್ನೆ; ಹೊಸ ವರಸೆ ತೆಗೆದೆ CD ಯುವತಿ!

ಸದ್ಯ ಜಾರಕಿಹೊಳಿ ವಿರುದ್ಧವೇ ತಿರುಗಿ ಬಿದ್ದಿರುವ ಸೀಡಿ ಯುವತಿ, ದೂರಿನ ಪ್ರತಿ ಬರೆಯುತ್ತಿರುವ ಫೋಟೋ ಕೂಡಾ ಲಭ್ಯವಾಗಿದೆ. ಅದೇನಿದ್ದರೂ ಸದ್ಯ ಕಳೆದ ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಹೈಡ್ರಾಮಾ ಇಂದು ತಾರ್ಕಿಕ ಅಂತ್ಯ ಕಾಣುತ್ತಾ ಅಥವಾ ಸಿಡಿ ಗ್ಯಾಂಗ್ ಹಾಗೂ ಯುವತಿ ತಮ್ಮ ಅಜ್ಞಾತವಾಸ ಮುಂದುವರೆಸುತ್ತಾರಾ ಎಂಬುವುದಕ್ಕೆ ಇಂದು ಮಧ್ಯಾಹ್ನ ಉತ್ತರ ಸಿಗಲಿದೆ.  

21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?