ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ಅಂತ್ಯ; ವಿಚಾರಣೆಗೆ ಬರಲು ಸೂಚನೆ

Oct 12, 2019, 11:57 AM IST

ಮಾಜಿ ಡಿಸಿಎಂ ಪರಮೇಶ್ವರ್ ನಿವಾಸ ಸದಾಶಿವ ನಗರದ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಕ್ತಾಯವಾಗಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿ ಹೊರಟಿದ್ದಾರೆ ಅಧಿಕಾರಿಗಳು. ಮುಂಜಾನೆ 3.30 ರವರೆಗೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. 89 ಲಕ್ಷ ಹಣ ಅಘೋಷಿತ ಆಸ್ತಿ ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಕಚೇರಿಗೆ ಹಾಜರಾಗಲು ಸೂಚನೆ ನೀಡಿ ತೆರಳಿದ್ದಾರೆ. ತುಮಕೂರಿನ ಸಿದ್ದಾರ್ಥ್ ಸಂಸ್ಥೆಯಲ್ಲಿ ಐಟಿ ಶೋಧ ಮುಂದುವರೆದಿದೆ.