ಕುಮಾರಸ್ವಾಮಿ ರಕ್ಷಣೆ ನಮ್ಮ ಆದ್ಯತೆ: ಬಸವರಾಜ್ ಬೊಮ್ಮಾಯಿ

Jan 25, 2020, 3:47 PM IST

ಮಾಜಿ ಸಿಎಂ ಕುಮಾರಸ್ವಾಮಿ ಹತ್ಯೆಗೆ ಸಂಚು ಆರೋಪಕ್ಕೆ  ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. 'ಜೀವ ಬೆದರಿಕೆ ಬಗ್ಗೆ ವಿವರ ಕೊಟ್ರೆ ತನಿಖೆ ಮಾಡಿಸ್ತೇವೆ. ಕುಮಾರಸ್ವಾಮಿಯವರ ರಕ್ಷಣೆ ನಮ್ಮ ಆದ್ಯತೆ. ಅವರಿಗೆ ಏನು ಭದ್ರತೆ ಕೊಡಬೇಕೋ ಅದನ್ನು ಈಗಾಗಲೇ ಒದಗಿಸಿದ್ದೇವೆ' ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.