ಚೈತ್ರಾ ಮಾತಿಗೆ ಮರುಳಾಗಿ 5 ಕೋಟಿ ರೂ ಕಳೆದುಕೊಂಡ ಉದ್ಯಮಿ ಹಿಂದಿನ ರೋಚಕ ಕಹಾನಿ!

Sep 13, 2023, 11:37 PM IST

ಹಿಂದುತ್ವ ಭಾಷಣಕಾರ್ತಿ ಚೈತ್ರಾ ಕುಂದಾಪುರ ಜೈಲು ಸೇರಿದ ಬೆನ್ನಲ್ಲೇ ವಂಚನೆ ಕತೆ ತೆರೆದುಕೊಂಡಿದೆ. ಚೈತ್ರ ಆಡಿಯೋ ಬಹಿರಂಗವಾಗಿದ್ದು, ಹಲವು ನಾಟಕಗಳು ಹೊರಬಿದ್ದಿದೆ.  ಗೋವಿಂದ ಬಾಬು ಪೂಜಾರಿ ಕೈಯಿಂದ 5 ಕೋಟಿ ರೂಪಾಯಿ ಪಡೆದು ವಂಚಿಸಿದ ಆರೋಪ ಚೈತ್ರಾ ಕುಂದಾಪರು ಮೇಲಿದೆ. ತನ್ನ 13ನೇ ವಯಸ್ಸಿಗೆ ಮುಂಬೈಗೆ ತೆರಳಿ ಬೆವರಿನ ಹನಿ ಮೂಲಕ ದುಡಿದು ಸಂಪಾದಿಸಿ ಹಣವನ್ನು ಚೈತ್ರಾ ಕುಂದಾಪುರ ಗುಳುಂ ಮಾಡಿದ್ದಾರೆ ಎಂದು ಪೂಜಾರಿ ಆರೋಪಿಸಿದ್ದಾರೆ. ಶೂನ್ಯದಿಂದ ಬದುಕು ಆರಂಭಿಸಿ 5,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಮ್ರಾಜ್ಯ ಕಟ್ಟಿದ ಗೋವಿಂದ ಬಾಬು ಪೂಜಾರಿ ಹಿಂದಿದೆ ರೋಚಕ ಕತೆ.