News Hour: ಜನರಿಗೆ ಟೋಪಿ ಹಾಕಿ, ಚಿಕನ್‌ ಲೆಗ್‌ ಪೀಸ್ ತಿಂದ್ಕೊಂಡು ಮೇಕೆದಾಟು ಪಾದಯಾತ್ರೆ: ಎಚ್‌ಡಿಕೆ

News Hour: ಜನರಿಗೆ ಟೋಪಿ ಹಾಕಿ, ಚಿಕನ್‌ ಲೆಗ್‌ ಪೀಸ್ ತಿಂದ್ಕೊಂಡು ಮೇಕೆದಾಟು ಪಾದಯಾತ್ರೆ: ಎಚ್‌ಡಿಕೆ

Published : Aug 18, 2023, 11:33 PM ISTUpdated : Aug 18, 2023, 11:35 PM IST

ಡಿಕೆ ಶಿವಕುಮಾರ್‌ ಮೇಕೆದಾಟು ಪಾದಯಾತ್ರೆ ಹೇಗೆ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಜನರಿಗೆ ಟೋಪಿ ಹಾಕಿ ಆತ ಪಾದಯಾತ್ರೆ ಮಾಡಿದ್ದಾನೆ. ಸುಪ್ರೀಂ ಕೋರ್ಟ್‌ ಹೇಳೋಕೆ ಮುಂಚೆಯೇ ಕಾವೇರಿ ನೀರು ಬಿಟ್ಟಿದ್ದಾರೆ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.
 

ಬೆಂಗಳೂರು (ಆ.18): ನೈಸ್‌ ರೋಡ್‌, ಕಾವೇರಿ ನೀರು ವಿಚಾರದಲ್ಲಿ ಇಂದು ಎಚ್‌ಡಿ ಕುಮಾರಸ್ವಾಮಿ, ಡಿಕೆ ಬ್ರದರ್ಸ್‌ ಅನ್ನು ತರಾಟೆಗೆ ತೆಗೆದುಕೊಂಡರು. ಇಂದು ಸುಪ್ರೀಂ ಕೋರ್ಟ್‌ ಹೇಳೋಕು ಮುಂಚೆಯೇ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ಹಾಗಿದ್ದರೆ ಮೇಕೆದಾಟು ಪಾದಯಾತ್ರೆ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಜನರಿಗೆ ಟೋಪಿ ಹಾಕಿ ಪಾದಯಾತ್ರೆ ಮಾಡಿದ್ದಾರೆ. ಚಿಕನ್‌ ಲೆಗ್‌ ಪೀಸ್‌, ಮಟನ್‌ ಸಾರು ತಿಂದ್ಕೊಂಡು ಹೋರಾಟ ಮಾಡಿದ್ದಷ್ಟೇ. ತಮಿಳುನಾಡಿನಲ್ಲಿ ಇರೋದು ನಿಮ್ಮ ಪಾರ್ಟರ್ನರ್‌ ಆಗಿರುವ ಸ್ಟ್ಯಾಲಿನ್‌ ಇದ್ದಾರೆ. ಅವರನ್ನ ಒಪ್ಪಿಸಿ ನೋಡೋಣ. ಕೊಟ್ಟು ತಗೊಳೋ ನೀತಿ ಮಾಡೋಕೆ ಹೊರಟಿದ್ದೀರಲ್ಲ ಕಾವೇರಿ ನದಿ ನೀರು ವಿಚಾರದಲ್ಲಿ ಅವರನ್ನು ಒಪ್ಪಿಸಿ ಎಂದಿದ್ದಾರೆ.

ಪರಿಣಿತಿ ಚೋಪ್ರಾ, ರಾಧಿಕಾ ಕುಮಾರಸ್ವಾಮಿ ಸೇರಿ ಈ ನಟಿಯರೂ ರಾಜಕಾರಣಿಗಳ ಮದುವೆಯಾಗಿದ್ದಾರೆ

ಇನ್ನು ನೈಸ್‌ ರಸ್ತೆ ವಿಚಾರವಾಗಿ ಡಿಕೆ ಸುರೇಶ್‌ ಹಾಗೂ ಎಚ್‌ಡಿ ಕುಮಾರಸ್ವಾಮಿ ನಡುವೆ ಮಾತಿನ ಕಾಳಗ ಜೋರಾಗಿದೆ. ಟಿವಿಯಲ್ಲಿ ಪ್ರಚಾರ ಸಿಗುತ್ತೆ ಅಂತಾ ಏನ್‌ ಬೇಕಾದ್ರೂ ಮಾತನಾಡ್ತಾರೆ ಅಂತಾ ಡಿಕೆ ಸುರೇಶ್‌, ಎಚ್‌ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ. ಗುತ್ತಿಗೆದಾರರಿಗೆ ಬೆದರಿಕೆ ಹಾಕಿದ ಹಾಗೆ ನನಗೆ ಹೆದರಿಸೋಕೆ ಬರಬೇಡಿ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more