ಗೋಳಗುಮ್ಮಟಕ್ಕಿಲ್ಲ UNESCO ಸ್ಥಾನಮಾನ: ಅಧಿಕಾರಿಗಳ ನಿರ್ಲಕ್ಷ್ಯ..ಪಾರಂಪರಿಕ ಕಟ್ಟಡಕ್ಕಿಲ್ಲ ವಿಶ್ವ ಮನ್ನಣೆ

ಗೋಳಗುಮ್ಮಟಕ್ಕಿಲ್ಲ UNESCO ಸ್ಥಾನಮಾನ: ಅಧಿಕಾರಿಗಳ ನಿರ್ಲಕ್ಷ್ಯ..ಪಾರಂಪರಿಕ ಕಟ್ಟಡಕ್ಕಿಲ್ಲ ವಿಶ್ವ ಮನ್ನಣೆ

Published : Sep 28, 2023, 11:13 AM IST

ವಿಜಯಪುರ ಗೋಳಗುಮ್ಮಟ ಅಂದ್ರೆ ಅದು ವಿಶ್ವಪರಂಪರಿಕ ಕಟ್ಟಡ ಎಂದೇ ಫೇಮಸ್. ವಿಭಿನ್ನ ಇತಿಹಾಸ ಹೊಂದಿರುವ ಈ ಗುಮ್ಮಟ್ಟ ಈಗ UNESCO ಸ್ಥಾನಮಾನದಿಂದ ಹೊರಗೆ ಉಳಿದಿದೆ.ಜನಪ್ರತಿನಿಧಿಗಳ,ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಮಾನ್ಯತೆ ಸಿಗದೇ ಅಭಿವೃದ್ಧಿಯಿಂದ ದೂರ ಉಳಿಯುವಂತಾಗಿದೆ.
 

ವಿಭಿನ್ನ ಕಟ್ಟಡ ಶೈಲಿ, ವಿಸ್ಮಯವೆಂಬಂತೆ ಗೋಚರಿಸುವ ಪಿಸುಗುಟ್ಟುವ ಗ್ಯಾಲರಿ. ಇಷ್ಟೇ ಅಲ್ಲ ಅನೇಕ ವಿಸ್ಮಯಗಳಿಂದ ವಿಶ್ವ ವಿಖ್ಯಾತಿ ಪಡೆದಿರೋ ವಿಜಯಪುರದ(Vijayapura) ಗೋಳಗುಮ್ಮಟ(Gol Gumbaz) ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರ್ತಾರೆ. ಸುವರ್ಣ ನ್ಯೂಸ್‌,ಕನ್ನಡಪ್ರಭ ನಡೆಸಿದ್ದ ಕರ್ನಾಟಕದ ಏಳು ಅದ್ಭುತಗಳಲ್ಲಿ ಗೋಳಗುಮ್ಮಟಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆದ್ರೆ ವಿಶ್ವವಿಖ್ಯಾತ ಗೋಳಗುಮ್ಮಟ UNESCO ಸ್ಥಾನಮಾನದಿಂದ ದೂರ ಉಳಿದಿದೆ. ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರುವ ಎಲ್ಲ ಅರ್ಹತೆ ಇದ್ರೂ ಜನಪ್ರತಿನಿಧಿಗಳು,ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇದುವರೆಗೂ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಐತಿಹಾಸಿಕ ತಾಣ ಪಾರಂಪರಿಕ ಪಟ್ಟಿಗೆ ಸೇರಿಬೇಕಾದ್ರೆ ಯುನೆಸ್ಕೋದ ನಿಬಂಧನೆ, ಮಾನದಂಡಗಳನ್ನು  ಜಿಲ್ಲಾಡಳಿತ ಮುಖ್ಯ ಕಾರ್ಯದರ್ಶಿಗೆ ಕಡತಗಳನ್ನ ಸಲ್ಲಿಸಬೇಕಿತ್ತು. ಇದಾದ ಬಳಿಕ ಕೇಂದ್ರಸರ್ಕಾರ ಜೊತೆಗೆ ಯುನೆಸ್ಕೋವರೆಗೂ ಈ ಪ್ರಸ್ತಾವನೆ ಸಲ್ಲಿಕೆ ಆಗುತ್ತೆ. ಬಳಿಕ ಈ ಪಟ್ಟಿ ಪರಿಶೀಲಿಸಿ ಯುನೆಸ್ಕೋ ತಂಡ ಪಾರಂಪರಿಕ ಕಟ್ಟಡಕ್ಕೆ ಮಾನ್ಯತೆ ನೀಡುತ್ತೆ..ಆದ್ರೆ ವಿಜಯಪುರ ಡಿಸಿ ಯುನೆಸ್ಕೋ ಮಾನದಂಡ ಪಾಲನೆ ಮಾಡದೇ ಇರೋದೆ ಪಾರಂಪರಿಕ ಪಟ್ಟಿಯಿಂದ ಹೊರಗುಳಿಯೋಕೆ ಕಾರಣವಾಗಿದೆ ಅಂತಾ ಇತಿಹಾಸ ತಜ್ಞರು ಹೇಳ್ತಿದ್ದಾರೆ.ಇತ್ತ ಸಂಸದ ರಮೇಶ ಜಿಗಜಿಣಗಿ ಕೂಡಲೇ ಕೇಂದ್ರಕ್ಕೆ ಪತ್ರ ಬರೆಯೋದಾಗಿ ಹೇಳಿದ್ರು.

ಇದನ್ನೂ ವೀಕ್ಷಿಸಿ:  ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ಕೊಟ್ಟ ಸಚಿವರು: ನರ್ವ್ ಸೆಂಟರ್ ಆರಂಭ, ಫೋನ್‌ನಲ್ಲೇ ಸಿಗುತ್ತೆ ಆರೋಗ್ಯ !

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more