ಇದು ಪುಷ್ಕರಣಿಯೋ, ಕಸ ಕಡ್ಡಿಗಳ ಗುಡ್ಡೆಯೋ? ಗೋಕರ್ಣದ ಮಹಾಬಲೇಶ್ವರ ಪುಷ್ಕರಣಿಯ ದುರಾವಸ್ಥೆ ಇದು!

Nov 26, 2020, 1:13 PM IST

ಉತ್ತರ ಕನ್ನಡ (ನ. 26): ಪುಣ್ಯ ಸ್ನಾನ, ಕ್ರಿಯಾ ಕರ್ಮ, ಪಿತೃ ಕಾರ್ಯಗಳನ್ನು ನೆರವೇರಿಸುವ ಇತಿಹಾಸ ಹೊಂದಿರುವ ಪ್ರಸಿದ್ಧ ಕ್ಷೇತ್ರ ಗೋಕರ್ಣ. ಇಲ್ಲಿನ ಮಹಾಬಲೇಶ್ವರ ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡುವ ವಾಡಿಕೆ ಇತ್ತು. ಇಲ್ಲಿ 5 ಬಾರಿ ಮುಳುಗಿ ಎದ್ದರೆ ಪಾಪ ಕರ್ಮಗಳು ಪರಿಹಾರವಾಗುತ್ತದೆ ಎಂಬ ನಂಬಿಕೆಯಿತ್ತು. 

ದೇವರ ಮನೆಯಲ್ಲಿ ನಾಗಪ್ಪ, ಬುಸ್‌ಗುಡಬೇಡಪ್ಪಾ ಎಂದ ಮನೆಯವರು, ಮುಂದೇನಾಯ್ತು?

ಆದರೆ ಈಗ ಈ ಪುಷ್ಕರಣಿಯಲ್ಲಿ ಮುಳುಗಲು ಜನ ಹಿಂದೇಟು ಹಾಕುತ್ತಿದ್ದಾರೆ. ಕಸ, ಕಡ್ಡಿ, ಪಾಚಿ, ಅನ್ನ, ಪಿಂಡಗಳು, ತುಂಬಿ ಹೋಗಿವೆ. ಇದರ ಸ್ವಚ್ಛತಾ ಕಾರ್ಯದ ಬಗ್ಗೆ ಸರ್ಕಾರವಾಗಲಿ, ಸಂಬಂಧಪಟ್ಟ ಆಡಳಿತ ವರ್ಗವಾಗಲಿ ಗಮನ ಹರಿಸುತ್ತಿಲ್ಲ. ದಯವಿಟ್ಟು ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಬೇಕು ಎನ್ನುವುದು ಬಿಗ್ 3 ಆಶಯ.