Free Hindu Temple: ಮುಸ್ಲಿಂ, ಕ್ರೈಸ್ತರಿಗೆ ಸ್ವತಂತ್ರ ಕೊಟ್ರೆ ಸರಿ, ಹಿಂದೂಗಳಿಗೆ ಕೊಟ್ರೆ ಯಾಕೆ ಉರಿ.?

Jan 1, 2022, 5:24 PM IST

ಬೆಂಗಳೂರು (ಜ. 01): ದೇವಾಲಯಗಳನ್ನು ಸ್ವತಂತ್ರಗೊಳಿಸಲು (Free Hindu Temple) ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಕಾಂಗ್ರೆಸ್‌ (Congress) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ದೇವಾಲಯಗಳನ್ನು ಸಂಕಷ್ಟಕ್ಕೆ ಸಿಲುಕಿಸಲು ಹಾಗೂ ಅವುಗಳ ಉಸ್ತುವಾರಿಯನ್ನು ಆರ್‌ಎಸ್‌ಎಸ್‌ಗೆ (RSS) ವಹಿಸಿಕೊಡಲು ನಡೆಸಿರುವ ಷಡ್ಯಂತ್ರ ಎಂದು ಆರೋಪಿಸಿದೆ.

Karnata Politics: ಎಸ್‌ಆರ್ ಪಾಟೀಲ್‌ಗೆ ಟಿಕೆಟ್‌ ತಪ್ಪಿಸಲು ಸಿದ್ದರಾಮಯ್ಯ ಕಾರಣ: ಶ್ರೀರಾಮುಲು

'ಕಾಂಗ್ರೆಸ್‌ಗೆ ದೇವಸ್ಥಾನಗಳಿಗೆ ಸ್ವಾತಂತ್ರ್ಯ ನೀಡಲು ಇಷ್ಟ ಇಲ್ಲ. ದೇವಸ್ಥಾನಗಳಿಗೆ ಸ್ವಾತಂತ್ರ್ಯ ಕೊಟ್ಟರೆ ಪ್ರಳಯ ಆಗುತ್ತಂತೆ. ನಾವು ಸ್ವಾತಂತ್ರ್ಯ ಕೊಟ್ಟೇ ಕೊಡುತ್ತೇವೆ. ಮುಸ್ಲಿಂ, ಕ್ರೈಸ್ತರಿಗೆ ಸ್ವತಂತ್ರ ಕೊಟ್ರೆ ಸರಿ, ಹಿಂದೂಗಳಿಗೆ ಕೊಟ್ರೆ ಯಾಕೆ ಉರಿ.? ರಾಮ, ಶಿವ ಎಂದರೆ ಕಾಂಗ್ರೆಸ್‌ಗೆ ಉರಿ' ಎಂದು ಆರ್ ಅಶೋಕ್ ಲೇವಡಿ ಮಾಡಿದರು.