ಮೈಸೂರು: IAS ಅಧಿಕಾರಿಗಳ ಕಿತ್ತಾಟಕ್ಕೆ ಶಾಸಕ, ಸಂಸದರೇ ಕಾರಣ: ಸಿದ್ದರಾಮಯ್ಯ

Jun 8, 2021, 5:29 PM IST

ಬೆಂಗಳೂರು (ಜೂ. 08): ಡೀಸಿ - ಆಯುಕ್ತೆ ಶಿಲ್ಪಾ ನಾಗ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ಧಾರೆ. ಇಬ್ಬರು ಅಧಿಕಾರಿಗಳ ಕಿತ್ತಾಟಕ್ಕೆ ಬಿಜೆಪಿ, ಶಾಸಕ, ಸಂಸದರೇ ಕಾರಣ ಎಂದು ವಿಪಕ್ಷ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನದ ಕಥೆ? 

'ಜೆಡಿಎಸ್ ಶಾಸಕ ಸಾರಾ ಮಹೇಶ್ ಕೂಡಾ ಇದಕ್ಕೆ ಕಾರಣ.  ಇತ್ತ ಸಿಂಧೂರಿ ಪರ ಮಾತಾಡಿ ಅವರನ್ನೂ ಎತ್ತಿಕಟ್ಟೋದು. ಅತ್ತ ಶಿಲ್ಪಾನಾಗ್ ಪರ ಮಾತಾಡಿ ಅವರನ್ನೂ ಎತ್ತಿ ಕಟ್ಟೋದು ಮಾಡುತ್ತಿದ್ದರು' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.