Karnataka rain: JNCASR 20 ವರ್ಷಗಳ ವೈಜ್ಞಾನಿಕ ಸಂಗ್ರಹ ನೀರುಪಾಲು, ಖುದ್ದು ಫೀಲ್ಡಿಗಿಳಿದ ಸಿಎಂ!

Karnataka rain: JNCASR 20 ವರ್ಷಗಳ ವೈಜ್ಞಾನಿಕ ಸಂಗ್ರಹ ನೀರುಪಾಲು, ಖುದ್ದು ಫೀಲ್ಡಿಗಿಳಿದ ಸಿಎಂ!

Published : Nov 24, 2021, 09:22 AM ISTUpdated : Nov 24, 2021, 09:40 AM IST

-  ಜವಾಹರಲಾಲ್‌ ನೆಹರು ಸಂಶೋಧನಾ ಕೇಂದ್ರಕ್ಕೆ ನೀರು ನುಗ್ಗಿ ಭಾರಿ ಅವಾಂತರ

- ಎಚ್‌ಐವಿ, ಕೊರೋನಾ ಸೇರಿ ವಿವಿಧ ವೈರಸ್‌ ಮಾದರಿ ಇಟ್ಟಿದ್ದ ಯಂತ್ರಗಳು ಆಫ್‌

- ಸಂಶೋಧನೆ ಉಪಕರಣಕ್ಕೂ ಹಾನಿ, ದೇಶದ ವಿಜ್ಞಾನ ಲೋಕಕ್ಕೆ ಭರಿಸಲಾಗದ ನಷ್ಟ

ಬೆಂಗಳೂರು (ನ. 24): ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆ ಭಾರೀ  (Rain) ಅವಾಂತರಗಳನ್ನು ಸೃಷ್ಟಿಸಿದೆ. ಎಲ್ಲೆಡೆ ಬೆಳೆ ಹಾನಿ, ಮಳೆ ಹಾನಿ ಕೆಲವು ಕಡೆ ಜೀವಹಾನಿಯೂ ಸಂಭವಿಸಿದೆ. ರಾಜಧಾನಿಯಲ್ಲಿ ಸುರಿದ ಶತಮಾನದ ಮಳೆಯಿಂದ ಜವಾಹರಲಾಲ್‌ ನೆಹರು ಅಡ್ವಾನ್ಸ್‌ ಸೈಂಟಿಫಿಕ್‌ ರಿಸಚ್‌ರ್‍ ಸೆಂಟರ್‌ಗೆ (JNCASR) ನೀರು ನುಗ್ಗಿ ದಶಕಗಳಿಂದ ‘ವೈರಾಣು ಜಗತ್ತಿನ’ ಮೇಲೆ ನಡೆಸಲಾಗುತ್ತಿದ್ದ ಸಂಶೋಧನೆಗಳು, ಸಂಗ್ರಹಿಸಿದ್ದ ಮಾದರಿಗಳು ಹಾಗೂ ಲಕ್ಷಾಂತರ ರುಪಾಯಿ ಮೌಲ್ಯದ ಸೂಕ್ಷ್ಮ ಉಪಕರಣಗಳೆಲ್ಲಾ ನೀರು ಪಾಲಾಗಿವೆ.

ಈ ಕೇಂದ್ರದ ವಿಜ್ಞಾನಿಗಳು ಹಾಗೂ ಸಂಶೋಧನಾರ್ಥಿಗಳು ಹೇಳುತ್ತಿರುವ ಪ್ರಕಾರ, ಎಚ್‌ಐವಿ ವೈರಸ್‌, ಮೂಲ ಕೊರೋನಾ ವೈರಾಣು ಹಾಗೂ ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಾಣು ಸೇರಿದಂತೆ ಕಾಲ ಕಾಲಕ್ಕೆ ರೂಪಾಂತರ ಪಡೆದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿವಿಧ ವೈರಾಣುಗಳ ಮಾದರಿ ಹಾಗೂ ಅವುಗಳ ಅನುವಂಶಿಕ ಮಾದರಿ ಸಂಗ್ರಹಿಸಿ ಅವುಗಳ ರೂಪಾಂತರ ಹೇಗಾಗುತ್ತದೆ, ಹೇಗೆ ಹರಡುತ್ತದೆ ಎಂಬ ಬಗ್ಗೆ ಕಳೆದ 20 ವರ್ಷಗಳಿಂದ ಸಂಶೋಧನೆ ನಡೆಸಲಾಗುತ್ತಿತ್ತು.  ಈ ಮಹಾ ಮಳೆಯಿಂದ ಸಂಶೋಧನೆಗೆ ಬಳಸುತ್ತಿದ್ದ ಲಕ್ಷಾಂತರ ರು. ಮೌಲ್ಯದ ಸೂಕ್ಷ್ಮ ಉಪಕರಣಗಳೆಲ್ಲವೂ ಹಾಳಾಗಿವೆ. ಇದರಿಂದ ದಶಕಗಳಿಂದ ನಡೆಸಿದ್ದ ನಮ್ಮ ಪರಿಶ್ರಮವೆಲ್ಲಾ ವ್ಯರ್ಥವಾದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more