Karnataka rain: JNCASR 20 ವರ್ಷಗಳ ವೈಜ್ಞಾನಿಕ ಸಂಗ್ರಹ ನೀರುಪಾಲು, ಖುದ್ದು ಫೀಲ್ಡಿಗಿಳಿದ ಸಿಎಂ!

Nov 24, 2021, 9:22 AM IST

ಬೆಂಗಳೂರು (ನ. 24): ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆ ಭಾರೀ  (Rain) ಅವಾಂತರಗಳನ್ನು ಸೃಷ್ಟಿಸಿದೆ. ಎಲ್ಲೆಡೆ ಬೆಳೆ ಹಾನಿ, ಮಳೆ ಹಾನಿ ಕೆಲವು ಕಡೆ ಜೀವಹಾನಿಯೂ ಸಂಭವಿಸಿದೆ. ರಾಜಧಾನಿಯಲ್ಲಿ ಸುರಿದ ಶತಮಾನದ ಮಳೆಯಿಂದ ಜವಾಹರಲಾಲ್‌ ನೆಹರು ಅಡ್ವಾನ್ಸ್‌ ಸೈಂಟಿಫಿಕ್‌ ರಿಸಚ್‌ರ್‍ ಸೆಂಟರ್‌ಗೆ (JNCASR) ನೀರು ನುಗ್ಗಿ ದಶಕಗಳಿಂದ ‘ವೈರಾಣು ಜಗತ್ತಿನ’ ಮೇಲೆ ನಡೆಸಲಾಗುತ್ತಿದ್ದ ಸಂಶೋಧನೆಗಳು, ಸಂಗ್ರಹಿಸಿದ್ದ ಮಾದರಿಗಳು ಹಾಗೂ ಲಕ್ಷಾಂತರ ರುಪಾಯಿ ಮೌಲ್ಯದ ಸೂಕ್ಷ್ಮ ಉಪಕರಣಗಳೆಲ್ಲಾ ನೀರು ಪಾಲಾಗಿವೆ.

Karnataka rain: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ತಂದೆ ಮಗನನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ.?

ಈ ಕೇಂದ್ರದ ವಿಜ್ಞಾನಿಗಳು ಹಾಗೂ ಸಂಶೋಧನಾರ್ಥಿಗಳು ಹೇಳುತ್ತಿರುವ ಪ್ರಕಾರ, ಎಚ್‌ಐವಿ ವೈರಸ್‌, ಮೂಲ ಕೊರೋನಾ ವೈರಾಣು ಹಾಗೂ ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಾಣು ಸೇರಿದಂತೆ ಕಾಲ ಕಾಲಕ್ಕೆ ರೂಪಾಂತರ ಪಡೆದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿವಿಧ ವೈರಾಣುಗಳ ಮಾದರಿ ಹಾಗೂ ಅವುಗಳ ಅನುವಂಶಿಕ ಮಾದರಿ ಸಂಗ್ರಹಿಸಿ ಅವುಗಳ ರೂಪಾಂತರ ಹೇಗಾಗುತ್ತದೆ, ಹೇಗೆ ಹರಡುತ್ತದೆ ಎಂಬ ಬಗ್ಗೆ ಕಳೆದ 20 ವರ್ಷಗಳಿಂದ ಸಂಶೋಧನೆ ನಡೆಸಲಾಗುತ್ತಿತ್ತು.  ಈ ಮಹಾ ಮಳೆಯಿಂದ ಸಂಶೋಧನೆಗೆ ಬಳಸುತ್ತಿದ್ದ ಲಕ್ಷಾಂತರ ರು. ಮೌಲ್ಯದ ಸೂಕ್ಷ್ಮ ಉಪಕರಣಗಳೆಲ್ಲವೂ ಹಾಳಾಗಿವೆ. ಇದರಿಂದ ದಶಕಗಳಿಂದ ನಡೆಸಿದ್ದ ನಮ್ಮ ಪರಿಶ್ರಮವೆಲ್ಲಾ ವ್ಯರ್ಥವಾದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.