ಮೈಸೂರು: ದೇಗುಲಗಳ ತೆರವಿಗೆ ಬ್ರೇಕ್, ಹಿಂದೂ ಜಾಗರಣಾ ವೇದಿಕೆಯಿಂದ ಪ್ರತಿಭಟನೆಗೆ ಸಿದ್ಧತೆ

Sep 14, 2021, 10:33 AM IST

ಮೈಸೂರು (ಸೆ. 14): ಹಿಂದೂ ಸಂಘಟನೆಗಳು, ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ದೇವಾಲಯಗಳ ತೆರವಿಗೆ ಬ್ರೇಕ್ ಹಾಕಿದೆ. 

ದೇಗುಲ ತೆರವು ವಿವಾದ: ಸಿಎಂಗೆ ದೂರವಾಣಿ ಮೂಲಕ ವಿವರಿಸಿದ ಪ್ರತಾಪ್ ಸಿಂಹ

ಮೈಸೂರು ಜಿಲ್ಲಾಡಳಿತ 157 ಧಾರ್ಮಿಕ ಕೇಂದ್ರಗಳ ಸ್ಥಳಾಂತರ, ತೆರವಿಗೆ ಮುಂದಾಗಿದೆ. ಹಿಂದೂ ಜಾಗರಣ ವೇದಿಕೆ ಪ್ರತಿಭಟನೆಗೆ ಮುಂದಾಗಿದೆ. ಸೆ. 16 ಕ್ಕೆ ಜಗದೀಶ್ ಕಾರಂತ್ ಮೈಸೂರಿಗೆ ಆಗಮಿಸಲಿದ್ದಾರೆ. ಅವರ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗುತ್ತಿದೆ.