ಮೀನುಗಾರರಿಗೆ 3 ಸಾವಿರ ರೂ ನೆರವು, ಸಿಎಂಗೆ ಶಾಸಕಿ ರೂಪಾಲಿ ನಾಯ್ಕ್‌ ಧನ್ಯವಾದ

Jun 4, 2021, 9:54 AM IST

ಬೆಂಗಳೂರು (ಜೂ. 04): ಸೆಮಿಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ಸಿಎಂ ಯಡಿಯೂರಪ್ಪ ಎರಡನೇ ಹಂತದಲ್ಲಿ 500 ಕೋಟಿ ರೂಗಳ ಪ್ಯಾಕೇಜ್ ನೀಡಿದ್ದಾರೆ. ಈ ಪ್ಯಾಕೇಜ್‌ನಲ್ಲಿ 18,746 ಮೀನುಗಾರರಿಗೆ ತಲಾ 3 ಸಾವಿರ ರೂ ಘೋಷಿಸಿದ್ದಾರೆ. ಇದಕ್ಕಾಗಿ 2.3 ಕೋಟಿ ರೂ ಮೀಸಲಿರಿಸಿದ್ದಾರೆ. ಸಿಎಂ ನೆರವಿಗೆ ಶಾಸಕು ರೂಪಾಲಿ ನಾಯಕ್ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಲಾಕ್‌ಡೌನ್ ವಿಸ್ತರಣೆ ಜೊತೆಗೆ 500 ಕೋಟಿ ರೂ ಪ್ಯಾಕೇಜ್ ಘೋಷಣೆ

' ಹಿಂದಿನ ಪ್ಯಾಕೇಜ್‌ನಲ್ಲಿ ಮೀನುಗಾರರು ವಂಚಿತರಾಗಿದ್ದರು. ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವು ನೀಡಿ ಎಂದು ಪತ್ರ ಬರೆದಿದ್ದೆ. ನಮ್ಮ ಮನವಿಗೆ ಸ್ಪಂದಿಸಿದ್ಧಾರೆ.