ಡಿಸಿಸಿ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರ: ರಮೇಶ್ ಕುಮಾರ್‌ರನ್ನು ಜೈಲಿಗೆ ಕಳ್ಸೋವರ್ಗು ಬಿಡಲ್ಲ: ಸುಧಾಕರ್

Oct 20, 2021, 2:15 PM IST

ಬೆಂಗಳೂರು (ಅ. 20): 'ಕೋಲಾರ ಡಿಸಿಸಿ ಬ್ಯಾಂಕನ್ನು ರಮೇಶ್ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಇಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಇದರ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು. ತನಿಖೆಯಾಗಲು ವಿಶ್ವನಾಥ್, ಶಿವಶಂಕರ್ ರೆಡ್ಡಿ ಬಿಡುವುದಿಲ್ಲ. ಕೋರ್ಟ್‌ಗೆ ಹೋಗಿ ಸ್ಟೇ ಆರ್ಡರ್ ತಂದಿದ್ದಾರೆ. ಇವರು ಸಾಚಾ ಆಗಿದ್ರೆ ತನಿಖೆಗೆ ಒಪ್ಪಿಕೊಳ್ಳುತ್ತಿದ್ದರು. ಸತ್ಯ ಆಚೆ ಬಂದರೆ ಜೈಲಿಗೆ ಹೋಗುತ್ತೀರಿ ಎಂದು ನಿಮಗೆ ಗೊತ್ತಿದೆ. ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಹೊರ ತರುತ್ತೇನೆ. ಈ ಸುಧಾಕರ್ ಸುಮ್ಮನೆ ಬಿಡುವುದಿಲ್ಲ' ಎಂದು ಜರಬಂಡೆ ಗ್ರಾಮದಲ್ಲಿ ಸಚಿವ ಡಾ. ಸುಧಾಕರ್ ಗುಡುಗಿದ್ದಾರೆ. 

ಮಂತ್ರಿಗಿರಿಗಾಗಿ ಜಾರಕಿಹೊಳಿ ಸರ್ಕಸ್, ಪದೇ ಪದೇ ಸಿಎಂ ಬೊಮ್ಮಾಯಿ ಭೇಟಿ