ಭರವಸೆ ಮೂಡಿಸಿದೆ ಆಕ್ಸ್‌ಫರ್ಡ್‌ ಲಸಿಕೆ : ಟ್ರಯಲ್‌ಗೆ ಒಳಗಾದ ವೈದ್ಯೆ ಹೇಳೋದೇನು?

Nov 25, 2020, 11:29 AM IST

ಬೆಂಗಳೂರು (ನ. 25): ಈಗ ದೇಶಾದ್ಯಂತ ಕೊರೊನಾ ಲಸಿಕೆ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಯಾವಾಗ ಲಸಿಕೆ ಬರುತ್ತದೆ? ಎಂದು ಎಲ್ಲರೂ ಕಾದು ಕುಳಿತಿದ್ದಾರೆ. ಈಗಾಗಲೇ ಆಕ್ಸ್‌ಫರ್ಡ್ ಲಸಿಕೆ ಬಗ್ಗೆ ಭರವಸೆ ಮೂಡಿದೆ. 

ರಾಜ್ಯದಲ್ಲಿ ಆಕ್ಸ್‌ಫರ್ಡ್‌ ಲಸಿಕೆ ಟ್ರಯಲ್ 3 ನೇ  ಹಂತದಲ್ಲಿದೆ. ಮೈಸೂರು ಜೆಎಸ್‌ಎಸ್ ಕಾಲೇಜಿನಲ್ಲಿ ಮೂರನೇ ಹಂತದ ಟ್ರಯಲ್ ನಡೆದಿದೆ. ಟ್ರಯಲ್‌ಗೆ ಒಳಗಾದ ವೈದ್ಯೆ ಡಾ. ಮಂಜುಳಾ ಸುವರ್ಣ ನ್ಯೂಸ್‌ ಜೊತೆ ಅನುಭವವನ್ನು ಹಂಚಿಕೊಂಡಿದ್ದಾರೆ. 

ಕೊರೊನಾ ಗೆದ್ದ ರಾಷ್ಟ್ರ, ಮೊಸಳೆ ಬಾಯಿಂದ ತಪ್ಪಿಸಿಕೊಂಡ ನಾಯಿ ಹೇಗಾಗಿದೆ?

'ಮೊದಲು ನನಗೂ ಭಯವಿತ್ತು. ನನ್ನ ಸಹೋದ್ಯೋಗಿಗಳು ತೆಗೆದುಕೊಂಡ ಮೇಲೆ ನನಗೂ ಧೈರ್ಯ ಬಂತು. ಸೇಫ್ ಅಂತ ತಿಳಿದ ಮೇಲೆ ಧೈರ್ಯ ಮಾಡಿ ನಾನು ವ್ಯಾಕ್ಸಿನ್ ತೆಗೆದುಕೊಂಡೆ' ಎಂದು ಮಂಜುಳಾ ಹೇಳಿದ್ದಾರೆ.