ದರ್ಶನ್ ಹಲ್ಲೆ ಕೇಸ್‌ಗೆ ಟ್ವಿಸ್ಟ್: ಮಿಡ್ ನೈಟ್ ರಹಸ್ಯ ಬಿಚ್ಚಿಟ್ಟ ಸ್ನೇಹಿತ ಹರ್ಷ ಮೆಲಂಟಾ

Jul 17, 2021, 1:06 PM IST

ಬೆಂಗಳೂರು (ಜು. 17): ಹೊಟೇಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದರ್ಶನ್ ಸ್ನೇಹಿತ ಹರ್ಷ, ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ. 

ದರ್ಶನ್ ಥಳಿಸಿಲ್ಲ ಎಂದ ಗಂಗಾಧರ್, ಹಲ್ಲೆ ನಡೆದಿದ್ದು ನಿಜವೆಂದ ಹೊಟೇಲ್ ಸಿಬ್ಬಂದಿ..!

'ದರ್ಶನ್ ನಮ್ಮನ್ನು ಊಟಕ್ಕೆ ಆಹ್ವಾನಿಸಿದ್ದರು. ನಾವು ಹೋಗಿದ್ವಿ. ಊಟ ಸ್ವಲ್ಪ ತಡವಾಗಿ ಬರುತ್ತಿತ್ತು. ಇದರಿಂದ ಸಿಟ್ಟಿಗೆದ್ದ ದರ್ಶನ್ ಬೈದಿದ್ದು ನಿಜ. ಹಲ್ಲೆ ನಡೆದಿಲ್ಲ' ಎಂದು ಹರ್ಷ ಹೇಳಿದ್ದಾರೆ. ಅಂದು ರಾತ್ರಿ ನಡೆದಿದ್ದೇನು.? ಸಂದೇಶ್ ಆಡಿಯೋದಲ್ಲಿ ಮಾತನಾಡಿದ್ದು ನಿಜನಾ.? ಇವೆಲ್ಲದರ ಬಗ್ಗೆ ಹರ್ಷ ಡಿಟೇಲಾಗಿ ಮಾತನಾಡಿದ್ದಾರೆ.