Jun 22, 2020, 6:57 PM IST
ಬೆಂಗಳೂರು (ಜೂ. 22): ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರಿಗೆ ಮಹಾಗಂಡಾಂತರ ಕಾದಿದೆ. ಕೋವಿಡ್ 19 ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕಾ ಕ್ರಮವನ್ನು ವಹಿಸುವ ಅಗತ್ಯವಿದೆ. ಇದೀಗ ಹೆಚ್ಚು ಜನ ಸೇರುವ ಜಾಗಗಳೇ ಡೇಂಜರ್ ಆಗಿದ್ದು, ಜನಸಾಂದ್ರತೆ ಇರುವ ಜಾಗಗಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕೆಆರ್ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ, ಗಾಂಧಿ ಬಜಾರ್, ಜಯನಗರ ಕಾಂಪ್ಲೆಕ್ಸ್ಗಳಲ್ಲಿ ಹೆಚ್ಚು ಜನ ಸಾಂದ್ರತೆ ಇದ್ದು ಶಿಫ್ಟ್ ಮಾಡುವ ಯೋಚನೆ ಎದುರಿಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!