CoverStory Operation: ಹೇಮಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಕಳ್ಳರ ಆಟ

Dec 4, 2021, 4:47 PM IST

ಬೆಂಗಳೂರು (ಡಿ. 04): (Chikkamagalur) ಹಾಸನ (Hassan) ಮಂಡ್ಯ (Mandya) ಜಿಲ್ಲೆಯ ಪಾಲಿಗೆ ಹೇಮಾವತಿ ಜೀವನದಿಯಾಗಿದೆ. ಲಕ್ಷಾಂತರ ಜನರ ಜೀವನಾಡಿಯಾಗಿದೆ. 1969-70 ನೇ ಇಸವಿಯಲ್ಲಿ ಹೇಮಾವತಿಗೆ ಗೋರೂರಿನಲ್ಲಿ ಅಣೆಕಟ್ಟು ಕಟ್ಟಲಾಯಿತು. 

Cover Story Impact: ರಾಯಚೂರು ವಸತಿ ಯೋಜನೆಯಲ್ಲಿ ಅವ್ಯವಹಾರ, ತನಿಖೆ ಚುರುಕು

ಇದರ ಹಿನ್ನೀರಿನಿಂದ 60-70 ಗ್ರಾಮಗಳು ಮುಳುಗಡೆಯಾಗುತ್ತದೆ. ಭೂ ಸಂತ್ರಸ್ತರಿಗೆ ಬದಲಿ ಭೂಮಿ ಕೊಡುವುದಾಗಿ ಸರ್ಕಾರ ಹೇಳುತ್ತದೆ. ಅದರಂತೆ ಶೇ. 90 ರಷ್ಟು ಸಂತ್ರಸ್ತರಿಗೆ ಭೂಮಿ ಕೊಟ್ಟಾಗಿದೆ. ಇನ್ನು ಕೆಲವರಿಗೆ ಭೂಮಿ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ಕವರ್ ಸ್ಟೋರಿ (Cover Story) ಕಾರ್ಯಾಚರಣೆಗಿಳಿದಾಗ ಇದರ ಹಿಂದೆ ದೊಡ್ಡ ದಂಧೆ ಇರುವುದು ಗೊತ್ತಾಗುತ್ತದೆ.