ಬೆಂಗ್ಳೂರು ಗಲಭೆ: ಬಂಧನ ಭೀತಿಯಲ್ಲಿರುವ ಕಾರ್ಪೋರೇಟರ್ ಜಾಕೀರ್ ಎಸ್ಕೇಪ್!

Aug 15, 2020, 4:30 PM IST

ಬೆಂಗಳೂರು (ಆ. 15): ಬೆಂಗಳೂರು ಗಲಭೆ ನಂತರ ಬಂಧನ ಭೀತಿಯಲ್ಲಿರುವ ಪುಲಕೇಶಿ ನಗರ ವಾರ್ಡ್ ಕಾರ್ಪೋರೇಟರ್ ಜಾಕೀರ್ ತಲೆ ಮರೆಸಿಕೊಂಡಿದ್ಧಾನೆ. ಈತನ ಮೇಲೆ ಗಲಭೆಗೆ ಪ್ರಚೋದನೆ ನೀಡಿದ ಆರೋಪವಿದೆ. ವಾಟ್ಸಾಪ್ ಕಾಲ್ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ದ ಎನ್ನಲಾಗಿದೆ. ಈತನ ಮೇಲೆ ಗಂಭೀರ ಆರೋಪ ಕೇಳಿ ಬಂದಿದ್ದು, ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.

 ಬೆಂಗಳೂರು ಗಲಭೆ ಹಿಂದೆ SDPI, ಸಂಘಟನೆ ನಿಷೇಧಕ್ಕೆ ಮೀನಮೇಷ ಯಾಕೆ?